Advertisement

ಬಜಾರ್ ಹೀರೋ ಧನ್ವೀರ್ ಗೆ  ದರ್ಶನ್ ಅಂದ್ರೆ ಪ್ರಾಣ!

07:17 AM Jan 26, 2019 | |

ಚಾಲೆಂಜಿಂಗ್ ಸ್ಟಾರ್ ದರ್ಶನ್ ಇಡೀ ಕರ್ನಾಟಕದ ಸಕಲ ಭೂಭಾಗಗಳಲ್ಲಿಯೂ ಅಭಿಮಾನಿ ಪಡೆ ಹೊಂದಿರೋ ನಟ. ಅವರನ್ನೇ ಆರಾಧಿಸುವ, ತಮ್ಮ ಸಾಧನೆಯ ಹಾದಿಗೆ ಅವರ ಬದುಕನ್ನೇ ಸ್ಪೂರ್ತಿ  ಅಂದುಕೊಂಡಿರುವವರು ದಂಡಿ ದಂಡಿಯಾಗಿ ಕಾಣಸಿಗುತ್ತಾರೆ. ಹೊರ ಜಗತ್ತಿನ ವಿಚಾರ ಬಿಡಿ, ಚಿತ್ರರಂಗದಲ್ಲಿಯೇ ಅಂಥವರ ಸಂಖ್ಯೆ ಸಾಕಷ್ಟಿದೆ. ಹೀಗೆ ದರ್ಶನ್ ಅವರನ್ನೇ ರೋಲ್ ಮಾಡೆಲ್ ಆಗಿಸಿಕೊಂಡು ಬಣ್ಣ ಹಚ್ಚಿದವರಲ್ಲಿ ಬಜಾರ್ ಚಿತ್ರದ ನಾಯಕಲ ಧನ್ವೀರ್ ಕೂಡಾ ಒಬ್ಬರು.

Advertisement

ಹಣವೊಂದಿದ್ದರೆ ಸಿನಿಮಾ ಮಾಡಿ ಬಿಡಬಹುದು, ಹೀರೋ ಕೂಡಾ ಆಗಬಹುದು ಅಂದುಕೊಂಡವರು ಅನೇಕರಿದ್ದಾರೆ. ಆದರೆ ಬಜಾರ್ ನಾಯಕ ಧನ್ವೀರ್ ಮಾತ್ರ ಕೊಂಚ ಡಿಫರೆಂಟು. ಮಾಮೂಲಿಯಾಗಿದ್ರೆ ಅವರೂ ಕೂಡಾ ಸಾಮಾನ್ಯ ಮೆಂಟಾಲಿಟಿಯನ್ನೇ ಹೊಂದಿರುತ್ತಿದ್ದರೇನೋ. ಆದರೆ ಖ್ಯಾತ ನಟನ ಮಗನಾಗಿದ್ದರೂ ಕಷ್ಟಪಟ್ಟು ಮೇಲೆ ಬಂದಿರೋ ಚಾಲೆಂಜಿಂಗ್ ಸ್ಟಾರ್ ಆರಂಭದಿಂದಲೂ ಧನ್ವೀರ್ ಪಾಲಿಗೆ ಸ್ಫೂರ್ತಿ .

ಈ ಕಾರಣದಿಂದಲೇ ನಿರ್ಮಾಪಕ ತಿಮ್ಮೇಗೌಡರ ಮಗನಾಗಿದ್ದರೂ ಕೂಡಾ ಧನ್ವೀರ್ ಕಷ್ಟಪಟ್ಟೇ ನಾಯಕ ನಟನಾಗಿ ಹೊರ ಹೊಮ್ಮಿದ್ದಾರೆ. ಬಜಾರ್ ಕಥೆ ಕೇಳಿದ ನಂತರ ನಿರ್ದೇಶಕ  ಸುನಿ ಬಳಿ ಈ ಪಾತ್ರಕ್ಕಾಗಿ ಏನೇನು ಕಸರತ್ತು ನಡೆಸಬೇಕೆಂದು ಧನ್ವೀರ್ ಮಾರ್ಗದರ್ಶನ ಪಡೆದುಕೊಂಡಿದ್ದರಂತೆ. ಅದಕ್ಕೆ ತಕ್ಕುದಾಗಿ ಎಲ್ಲದರಲ್ಲಿಯೂ ಧನ್ವೀರ್ ಪಳಗಿಕೊಂಡಿದ್ದಾರೆ. ಈ ಸಿನಿಮಾ ಹಾಡೊಂದಕ್ಕಾಗಿ ಅತೀ ಕಡಿಮೆ ಅವಧಿಯಲ್ಲಿ ಸಿಕ್ಸ್ ಪ್ಯಾಕ್ ರೂಪಿಸಿಕೊಂಡಿದ್ದಾರೆಂದರೆ ಧನ್ವೀರ್ ಗುಣ ಎಂಥಾದ್ದೆಂಬುದು ಯಾರಿಗಾದರೂ ಅರ್ಥವಾಗುತ್ತೆ. ಇಂಥಾ ಹಾರ್ಡ್  ವರ್ಕ್ ಗೆಲ್ಲ ದರ್ಶನ್ ಅವರೇ ಸ್ಫೂರ್ತಿ  ಎಂಬುದು ಧನ್ವೀರ್ ಮಾತು.

Advertisement

Udayavani is now on Telegram. Click here to join our channel and stay updated with the latest news.

Next