Advertisement

Basroor: ಹೊಂಡಮಯ ಸಟ್ವಾಡಿ ಸರ್ಕಲ್‌- ಕೋಣಿ ರಸ್ತೆ

02:44 PM Oct 15, 2024 | Team Udayavani |

ಬಸ್ರೂರು: ಬಸ್ರೂರುಕುಂದಾಪುರ ರಾಜ್ಯ ಹೆದ್ದಾರಿಯ ಸಟ್ವಾಡಿ ಸರ್ಕಲ್‌, ಕೋಣಿ ಬಳಿಯ ಮುಖ್ಯ ರಸ್ತೆಯ ಅಲ್ಲಲ್ಲಿ ಹಲವೆಡೆಗಳಲ್ಲಿ ಹೊಂಡಮಯ ರಸ್ತೆಯಿಂದಾಗಿ ಜನ ಸಂಕಷ್ಟಪಡುವಂತಾಗಿದೆ. ಈ ಮಾರ್ಗದಲ್ಲಿ ವಾಹನ ಸವಾರರು ನಿತ್ಯ ಸರ್ಕಸ್‌ ಮಾಡಿಕೊಂಡು ಸಂಚರಿಸುವಂತಾಗಿದೆ.

Advertisement

ಮೂರು ರಸ್ತೆಗಳು ಕೂಡುವ ಸಟ್ವಾಡಿಯ ಐ.ಎಂ. ಜಯರಾಮ ಶೆಟ್ಟಿ ಸರ್ಕಲ್‌ ಬಳಿಯಂತೂ ಬೃಹತ್‌ ಹೊಂಡಗಳಿಂದಾಗಿ ಜನ ಹೈರಾಣಾಗಿದ್ದಾರೆ. ಇಲ್ಲಿ ವಾಹನಗಳ ದಟ್ಟಣೆ ತೀವ್ರವಾಗಿರುತ್ತದೆ. ಆದರೆ ಇಲ್ಲಿನ ಸರ್ಕಲ್‌ ಬಳಿ ಉದ್ದಕ್ಕೂ ಹೊಂಡಬಿದ್ದು ವಾಹನ ಸಂಚಾರ ಸಂಕಷ್ಟಮಯವಾಗಿದೆ. ಈಗಾಗಲೇ ಅನೇಕ ದ್ವಿಚಕ್ರ ವಾಹನಗಳು ಇಲ್ಲಿ ಪಲ್ಟಿಯಾಗಿವೆ. ಇಷ್ಟಾದರೂ ಈ ರಾಜ್ಯ ಹೆದ್ದಾರಿಯ ಹೊಂಡಗಳಿಗೆ ತೇಪೆ ಹಾಕದೇ, ಹಾಗೆಯೇ ಉಳಿದಿವೆ.

ಇದೇ ರಸ್ತೆಯ ಕುಂದಾಪುರದ ಕಡೆ ಸಾಗುವಾಗ ಕೋಣಿಯ ಎಚ್‌.ಎಂ.ಟಿ. ತಿರುವಿನ ಸಮೀಪ ರಾಜ್ಯ ರಸ್ತೆಯಲ್ಲಿ ಉದ್ದಕ್ಕೂ ಹೊಂಡ ಬಿದ್ದಿದ್ದು ಹಲವು ಸಮಯದಿಂದ ಹಾಗೆಯೇ ಉಳಿದಿದೆ. ಇನ್ನಾದರೂ ಈ ರಸ್ತೆಯ ಹೊಂಡಗಳನ್ನು ಶಾಶ್ವತವಾಗಿ ಮುಚ್ಚಿ ಸುಗಮ ಸಂಚಾರಕ್ಕೆ ಸಂಬಂಧ ಪಟ್ಟವರು ಅನುವು ಮಾಡಿಕೊಡ ಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next