Advertisement

ಹೊಸ ಶಿಕ್ಷಣ ನೀತಿ ಅಪೂರ್ಣ: ಹೊರಟ್ಟಿ

10:38 PM Aug 30, 2021 | Team Udayavani |

ಹಾವೇರಿ: ಸರಕಾರ ಬದಲಾದಂತೆ ಶಿಕ್ಷ‌ಣ ನೀತಿಯನ್ನು ಬದಲಾಯಿಸುವುದು ಸರಿಯಲ್ಲ. ಈಗಿನ ಹೊಸ ಶಿಕ್ಷಣ ನೀತಿ ಪರಿಪೂರ್ಣತೆಯಿಂದ ಕೂಡಿಲ್ಲ ಎಂದು ವಿಧಾನ ಪರಿಷತ್‌ ಸಭಾಪತಿ ಬಸವರಾಜ ಹೊರಟ್ಟಿ ಹೇಳಿದರು.

Advertisement

ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಹಲವಾರು ದೇಶವನ್ನು ಸುತ್ತಿದ್ದೇನೆ. ಅಲ್ಲಿ ಸರಕಾರ ಬದಲಾದಂತೆ ಶಿಕ್ಷ‌ಣ ನೀತಿಗಳು ಬದಲಾಗುವುದಿಲ್ಲ. ನಮ್ಮ ದೇಶದಲ್ಲಿ ಮೂರು ಹಂತದ ಶಿಕ್ಷಣವೇ ಉತ್ತಮವಾಗಿತ್ತು. ಆದ್ದರಿಂದ ಹಿಂದಿನ ಶಿಕ್ಷ‌ಣ ಪದ್ಧತಿಯೇ ಸೂಕ್ತವಾಗಿದೆ. ಹೊಸ ಶಿಕ್ಷಣ ನೀತಿಯ ವರದಿ ವಿಸ್ತೃತವಾಗಿ ಅಧ್ಯಯನ ಮಾಡಿ ಕೆಲವು ಬದಲಾವಣೆ ಮಾಡಬೇಕು ಎಂದರು.

Advertisement

Udayavani is now on Telegram. Click here to join our channel and stay updated with the latest news.

Next