Advertisement

ಜನತಾ ಪರಿವಾರ ಒಗ್ಗೂಡಿಸಲು “ಘರ್‌ ವಾಪ್ಸಿ’: ಹೊರಟ್ಟಿ

12:56 AM Jan 26, 2021 | Team Udayavani |

ಹುಬ್ಬಳ್ಳಿ: ಜನತಾ ಪರಿವಾರವನ್ನು ಒಂದುಗೂಡಿಸಲು ಹಾಗೂ ಜೆಡಿಎಸ್‌ ಪಕ್ಷವನ್ನು ಇನ್ನಷ್ಟು ಬಲವರ್ಧನೆಗೊಳಿಸಿ ಯುವಕರಿಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ. ಪಕ್ಷ ಬಿಟ್ಟು ಹೋದವರನ್ನು ವಾಪಸ್‌ ಕರೆತರಲಾಗುವುದು. ಯುವಕರಿಗೆ ಶೇ.45 ಸ್ಥಾನಗಳನ್ನು ನೀಡಲಾಗುವುದು ಎಂದು ವಿಧಾನ ಪರಿಷತ್‌ ಸದಸ್ಯ ಬಸವರಾಜ ಹೊರಟ್ಟಿ ಹೇಳಿದರು.

Advertisement

ಪಕ್ಷದ ಬೆಳಗಾವಿ ವಿಭಾಗ ಮಟ್ಟದ ಕೋರ್‌ ಕಮಿಟಿ ಸಭೆಯ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜನತಾ ಪರಿವಾರದವರನ್ನು ಹಾಗೂ ಪಕ್ಷ ತೊರೆದು ಹೋದವ

ರನ್ನು ಮರಳಿ ತರಲು ಪ್ರಯತ್ನಿಸಲಾಗುವುದು ಎಂದರು.

ನಾನೇ ಸಭಾಪತಿ ಅಭ್ಯರ್ಥಿ :

ಜೆಡಿಎಸ್‌ನಲ್ಲಿ ನಾನೇ ಸಭಾಪತಿ ಅಭ್ಯರ್ಥಿ ಎಂಬ ಒಮ್ಮತದ ಅಭಿಪ್ರಾಯವಿದೆ. ಈ ಹಿನ್ನೆಲೆಯಲ್ಲಿ ಜೆಡಿಎಸ್‌ ನಲ್ಲಿ ನಾನೇ ಸಭಾಪತಿ ಅಭ್ಯರ್ಥಿ. ಬಿಜೆಪಿ ಉಪ ಸಭಾಪತಿಗೆ ಸ್ಪರ್ಧಿಸಿದರೆ ನಾನು ಸಭಾಪತಿ ಆಗುವುದು ನಿಶ್ಚಿತ ಎಂದು ಹೇಳಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next