Advertisement

ಬಸವಣ್ಣ ಕಾಯಕ ಸಂಸ್ಕೃತಿ ಸಾರಿದ ವಿಶ್ವಗುರು

03:29 PM May 04, 2022 | Team Udayavani |

ಗಜೇಂದ್ರಗಡ: ವಚನ ಕಾಯಕ ತತ್ವದ ಮೂಲಕ ಸಮಾಜದಲ್ಲಿ ಸೌಹಾರ್ದ ಬದುಕಿಗೆ ಮುನ್ನುಡಿ ಬರೆದು ಶಾಂತಿ, ನೆಮ್ಮದಿಯ ಬೀಜ ಮಂತ್ರ ಬಿತ್ತಿದ ಸಮಾನತೆಯ ಹರಿಕಾರ, ಮಾನವತಾವಾದಿ ಬಸವಣ್ಣನವರ ಆದರ್ಶಗಳು ವಿಶ್ವಮಾನ್ಯ ಎಂದು ಶಾಸಕ ಕಳಕಪ್ಪ ಬಂಡಿ ಹೇಳಿದರು.

Advertisement

ಪಟ್ಟಣದ ತಹಶೀಲ್ದಾರ್‌ ಕಾರ್ಯಾಲಯದಲ್ಲಿ ಮಂಗಳವಾರ ನಡೆದ ವಿಶ್ವಗುರು ಬಸವಣ್ಣನವರ ಜಯಂತ್ಯುತ್ಸವದಲ್ಲಿ ಪಾಲ್ಗೊಂಡು ಮಾತನಾಡಿದರು.

ಸಮಾನತೆಯ ಸಂಕೇತದೊಂದಿಗೆ ಸಹಬಾಳ್ವೆಯ ಮಂತ್ರ ದಂಡವನ್ನು ವಿಶ್ವಕ್ಕೆ ಪರಿಚಯಿಸುವ ಮೂಲಕ ವಿಶ್ವಗುರು ಎಂಬ ಹೆಗ್ಗಳಿಕೆಗೆ ಪಾತ್ರರಾದ ಬಸವಣ್ಣನವರು ಪಾಲಿಸಿದ ಸಮನ್ವಯತೆಯನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಂಡು, ಬಾಳಿ ಬದುಕಿದಾಗ ಆಚರಣೆಗಳು ಸಾರ್ಥಕಗೊಳ್ಳತ್ತವೆ. ಬಸವಣ್ಣನವರು ಕೇವಲ ಒಂದು ಜಾತಿ, ಧರ್ಮ, ಪಂಗಡದ ಒಳಿತಿಗೆ ಶ್ರಮಿಸದೇ, ಇಡಿ ಮನುಕುಲದ ಕಲ್ಯಾಣಕ್ಕಾಗಿ ಶ್ರಮಿಸಿದವರು. ಬಸವಣ್ಣನವರ ಆದರ್ಶಗಳನ್ನು ಸಮಾಜದ ಎಲ್ಲಾ ವರ್ಗದ ಜನರಿಗೂ ತಲುಪಿಸುವ ಮಹತ್ತರ ಜವಾಬ್ದಾರಿ ನಮ್ಮ ಮೇಲಿದೆ ಎಂದರು.

ಸಂಸದ ಶಿವಕುಮಾರ ಉದಾಸಿ ಮಾತನಾಡಿ, ಬಸವಣ್ಣನವರು 12ನೇ ಶತಮಾನದಲ್ಲಿಯೇ ಕುಡಿಯುವ ನೀರು ಒಂದೇ, ಸೇವಿಸುವ ಗಾಳಿ ಒಂದೇ ನಾವೆಲ್ಲರೂ ಸಮಾನರು. ನಮ್ಮಲ್ಲಿ ಮೇಲು, ಕೀಳೇಂಬ ನಿಜ ಉಣಬಡಿಸಿ ಸಮಾಜವನ್ನು ಒಗ್ಗೂಡಿಸಲು ತಮ್ಮ ವಚನಗಳ ಮೂಲಕ ಸಂದೇಶ ಸಾರಿ, ಅನುಭವ ಮಂಟಪ ಸ್ಥಾಪಿಸಿ, ಕಾಯಕ ಸಂಸ್ಕೃತಿ ನೀಡಿದ್ದಾರೆ. ಅಕ್ಕಮಹಾದೇವಿ, ಬಸವಣ್ಣ, ಅಲ್ಲಮಪ್ರಭು ರಚಿಸಿದ ವಚನಗಳು ಮಾನವೀಯ ಅಂತಃಕರಣ ಸಾರುತ್ತಿವೆ ಎಂದರು.

ತಹಶೀಲ್ದಾರ್‌ ರಜನಿಕಾಂತ್‌ ಕೆಂಗೇರಿ, ಬಿ.ಎಂ. ಸಜ್ಜನರ, ಅಂಬರೀಶ ಬಳೀಗೇರ, ಶಿವಬಸವ ಬೆಲ್ಲದ, ಮುತ್ತು ಕಡಗದ, ಕನಕಪ್ಪ ಅರಳಿಗಿಡದ, ಶಿವಾನಂದ ಮಠದ, ಶಿರಸ್ತೇದಾರ್‌ ವೀರಣ್ಣ ಅಡಗತ್ತಿ, ಕಂದಾಯ ನಿರೀಕ್ಷಕಿ ಗೌರಮ್ಮ ಆನಂದಪ್ಪನವರ, ಉಮೇಶ ಅರಳಿಗಿಡದ ಸೇರಿದಂತೆ ಇತರರು ಇದ್ದರು.

Advertisement

ಶಾಸಕರ ಜನಸಂಪರ್ಕ ಕಚೇರಿ: ಪಟ್ಟಣದ ಶಾಸಕರ ಜನಸಂಪರ್ಕ ಕಚೇರಿಯಲ್ಲಿ ವಿಶ್ವಗುರು ಬಸವಣ್ಣನವರ ಜಯಂತಿ ಆಚರಿಸಲಾಯಿತು. ಬಿಜೆಪಿ ರೋಣ ಮಂಡಲ ಅಧ್ಯಕ್ಷ ಮುತ್ತು ಕಡಗದ, ಶಿವಬಸವ ಬೆಲ್ಲದ, ಶಿವಾನಂದ ಮಠದ ಉಮೇಶ ಮಲ್ಲಾಪೂರ ಇತರರು ಇದ್ದರು.

ಬೈಕ್‌ ರ್ಯಾಲಿ: ಪಟ್ಟಣದಲ್ಲಿ ಬಸವ ಜಯಂತಿ ಪ್ರಯುಕ್ತ ಪಟ್ಟಣದಲ್ಲಿ ವೀರಶೈವ ಲಿಂಗಾಯತ ಸಮಾಜದ ವತಿಯಿಂದ ಬಸವಣ್ಣನವರ ಭಾವಚಿತ್ರದೊಂದಿಗೆ ಬೈಕ್‌ ರ್ಯಾಲಿ ನಡೆಸಲಾಯಿತು. ಮಹಾ ಮಾನವತಾವಾದಿ ಬಸವಣ್ಣನವರ ಜಯಂತಿ ಪ್ರಯುಕ್ತ ಪಟ್ಟಣ ಸೇರಿದಂತೆ ಗೋಗೇರಿ, ಕಾಲಕಾಲೇಶ್ವರ, ಸೂಡಿ, ರಾಜೂರ, ಕೊಡಗಾನೂರ, ಸುತ್ತಲಿನ ಗ್ರಾಮಗಳು, ಸರ್ಕಾರಿ ಕಚೇರಿಗಳು, ಅರೆ ಸರ್ಕಾರಿ ಕಚೇರಿ, ಸಂಘಸಂಸ್ಥೆಗಳಲ್ಲಿ ಜಯಂತಿ ಆಚರಿಸಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next