Advertisement

ಟ್ಯಾಂಕರ್‌ ಮಾಲೀಕರಿಗೆ ಸಕಾಲಕ್ಕೆ ಬಿಲ್ ಪಾವತಿಸಿ

12:57 PM Aug 28, 2019 | Naveen |

ಬಸವಕಲ್ಯಾಣ: ಸಾಮಾಜಿಕ ಬದುಕಿನಲ್ಲಿ ಸಮಾಜದವರು ಉನ್ನತ ಸ್ಥಾನದಲ್ಲಿ ಹೋಗಬೇಕಾದರೆ, ಸ್ಪರ್ಧಾತ್ಮಕ ಯುಗದಲ್ಲಿ ಪ್ರತಿಯೊಬ್ಬರು ಶಿಕ್ಷಣ ಕಲಿಯುವದು ತುಂಬಾ ಅವಶ್ಯಕವಾಗಿದೆ ಎಂದು ನಾರಾಯಣಪೂರ ಜಿಲ್ಲಾ ಪಂಚಾಯತ ಸದಸ್ಯೆ ಅಮ್ರಪಾಲಿ ವೀರಣ್ಣಾ ಹಲಗೆ ಹೇಳಿದರು.

Advertisement

ನಗರದ ಧರಂಪ್ರಕಾಶ ಓಣಿಯಲ್ಲಿ ಮಾದಿಗ ದಂಡೋರ ಹೋರಾಟ ಸಮಿತಿ ವತಿಯಿಂದ ಆಯೋಜಿಸಿದ್ದ ಸಾಹಿತ್ಯ ಸಾಮ್ರಾಟ ಅಣ್ಣಾಬಾವು ಸಾಠೆ ಜಯಂತ್ಯುತ್ಸವ ಸಮಾರಂಭದಲ್ಲಿ ಅವರು ಮಾತನಾಡಿದರು.

ಶಿಕ್ಷಣ ಎಲ್ಲಕ್ಕಿಂತ ಮುಖ್ಯವಾಗಿದೆ. ಯಾರು ಶಿಕ್ಷಣ ಕಲಿಯುವುದಿಲ್ಲವೊ ಅವರು ಜೀವನದಲ್ಲಿ ಪ್ರಗತಿ ಕಾಣಲು ಅಸಾಧ್ಯ ಎಂದರು. ಡಾ|ಬಾಬಾಸಾಹೇಬ ಅಂಬೇಡ್ಕರ್‌ ಅವರು ಹೇಗೆ ಶಿಕ್ಷಣಕ್ಕೆ ಮಹತ್ವ ಕೊಟ್ಟು ಸಂವಿಧಾನವನ್ನು ನಮಗೆ ನೀಡಿದ್ದಾರೊ ಹಾಗೆ, ಅವರ ಆದರ್ಶ ತತ್ವಗಳನ್ನು ಪರಿಪಾಲನೆ ಮಾಡಿಕೊಂಡು ಹೋದರೆ ಖಂಡಿತ ಮುಂದೆ ಬರಲು ಸಾಧ್ಯ ಎಂದರು.

ನಿವೃತ್ತ ಐಎಎಸ್‌ ಅಧಿಕಾರಿ ಬಾಬುರಾವ್‌ ಮುಡಬಿ ಮಾತನಾಡಿ, ಅಣ್ಣಾಬಾವು ಸಾಠೆ ಅವರು ಅನೇಕ ಕಥೆ, ಕಾದಂಬರಿ, ನಾಟಕಗಳನ್ನು ಬರೆದಿದ್ದಾರೆ. ಅವರು ಬರೆದ ಕೃತಿಗಳು ಸಮಾಜಕ್ಕೆ ದಾರಿದೀಪವಾಗಿವೆ. ಆದರೆ ಮಾದಿಗ ಸಮುದಾಯದವರು ಹಿಂದೆ ಉಳಿದಿರುವುದು ನೋವಿನ ಸಂಗತಿಯಾಗಿದೆ. ಆದ್ದರಿಂದ ಸಮಾಜದ ವಿದ್ಯಾರ್ಥಿಗಳು ಸರ್ಕಾರ ನೀಡುತ್ತಿರುವ ಯೋಜನೆಗಳನ್ನು ಸದ್ಬಳಕೆ ಮಾಡಿಕೊಂಡು ಮುಂದೆ ಬರಬೇಕು ಎಂದು ಸಲಹೆ ನೀಡಿದರು.

ಸಮಾಜ ಮುಖಂಡರಾದ ಚಂದ್ರಕಾಂತ ಹಿಪ್ಪಳಗಾಂವಕರ್‌ ಮಾತನಾಡಿ, ಶಿಕ್ಷಣ ಸಂಘಟನೆ ಮತ್ತು ಹೋರಾಟವನ್ನು ಯಾರು ಮಾಡುತ್ತಾರೊ ಅಂಥವರು ಜೀವನದಲ್ಲಿ ಮುಂದೆ ಬರಲು ಸಾಧ್ಯವಾಗುತ್ತದೆ ಎಂದರು.

Advertisement

ಸೊಲ್ಲಾಪುರದ ಆರ್‌ಟಿಒ ಸಂಜುಕುಮಾರ ವಾಡೇಕರ್‌ ವಿಶೇಷ ಉಪನ್ಯಾಸ ನೀಡಿದರು. ನಗರಸಭೆ ಸದಸ್ಯ ಮಾರುತಿ ಲಾಡೆ ಅಧ್ಯಕ್ಷತೆ ವಹಿಸಿದ್ದರು. ಇದಕ್ಕೂ ಮುನ್ನ ಸಿಡಿಪಿಒ ಶಾರದಾ ಕಲಮಲಕರ್‌ ಧ್ವಜಾರೋಹಣ ನೆರವೇರಿಸಿದರು. ಜಿಲ್ಲಾ ಪಂಚಾಯತ ಮಾಜಿ ಅಧ್ಯಕ್ಷ ಅನೀಲ ಭುಸಾರೆ, ಬಿಜೆಪಿ ಯುವ ಮುಖಂಡ ಶರಣು ಸಲಗರ, ಡಿಎಸ್‌ಎಸ್‌ ರಾಜ್ಯ ಸಂಚಾಲಕ ಮಾರುತಿ ಬೌದ್ಧೆ, ಮಾದಿಗ ದಂಡೋರ ಹೋರಾಟ ಸಮಿತಿ ರಾಜ್ಯ ಪ್ರಧಾನ ಕಾರ್ಯದರ್ಶಿ ಫರ್ನಾಂಡಿಸ್‌ ಹಿಪ್ಪಳಗಾಂವ, ಬಿಜೆಪಿ ಅಧ್ಯಕ್ಷ ವೀರಣ್ಣಾ ಹಲಗೆ, ಸೂರ್ಯಕಾಂತ ಉಮ್ಮಾಪುರೆ, ಮನೋಹರ್‌ ಮೈಸೆ, ಜಿ. ಎಸ್‌.ಲಿಂಗರಾಜ ಅರಸ, ಗುರುನಾಥ ಸೋನಕೆ, ನಗರಸಭೆ ಸದಸ್ಯ ದೀಪಕ ಗುಡ್ಡಾ, ಸಮಾಜ ಸೇವಕ ಧನರಾಜ ರಾಜೋಳೆ ಇದ್ದರು. ಶಿರೋಮಣಿ ನಿಲೂರೆ ಸ್ವಾಗತಿಸಿದರು. ಮುಖ್ಯಗುರು ರಮೇಶ ಉಮ್ಮಾಪುರೆ ನಿರೂಪಿಸಿದರು. ಉಪನ್ಯಾಸಕ ಪ್ರಹ್ಲಾದ ಚೆಂಗಟೆ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next