Advertisement

ವಿದ್ಯುತ್‌ ಬಿಲ್‌ ಸಮಸ್ಯೆ ಬಗೆಹರಿಸಿ

04:09 PM May 17, 2020 | Naveen |

ಬಸವಕಲ್ಯಾಣ: ಪ್ರತಿ ತಿಂಗಳು ಬರುವುದಕ್ಕಿಂತ ನಿರೀಕ್ಷೆಗೂ ಮೀರಿ ವಿದ್ಯುತ್‌ ಬಿಲ್‌ ಬಂದಿದೆ. ಅದನ್ನು ಸರಿಪಡಿಸಬೇಕೆಂದು ನಗರದ ಕೆಲ ಬಡಾವಣೆ ನಿವಾಸಿಗಳು ಜೆಸ್ಕಾಂ ಉಪ ವಿಭಾಗದ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರಿಗೆ ಮನವಿ ಸಲ್ಲಿಸಿದರು.

Advertisement

ಆನ್‌ಲೈನ್‌ ಮೂಲಕ ಬಿಲ್‌ ತುಂಬಿದರೂ ಬಾಕಿ ತೋರಿಸುತ್ತಿದೆ. ಪ್ರತಿ ತಿಂಗಳು ಬಿಲ್‌ ಬರುವುದಕ್ಕಿಂತ ಮೂರುಪಟ್ಟು ವಿದ್ಯುತ್‌ ಬಿಲ್‌ ಬಂದಿದೆ. ಇದರಿಂದ ಸಮಸ್ಯೆ ಎದುರಿಸುವಂತಾಗಿದೆ. ಆದ್ದರಿಂದ ಕೂಡಲೇ ಸಂಬಂಧಪಟ್ಟ ಅಧಿಕಾರಿಗಳಿಗೆ ಬಿಲ್‌ ಸಮಸ್ಯೆ ಬಗೆಹರಿಸುವಂತೆ ಮನವಿ ಮೂಲಕ ಒತ್ತಾಯಿಸಿದರು. ಜಗನ್ನಾಥ ಬಾಬುರಾವ್‌ ಪಾಂಚಾಳ, ಶಾಮರಾವ್‌ ಹೊಸಮನಿ, ಅಂಜನಾದೇವಿ, ಉದಯಕುಮಾರ ಗಂಗಾಧರ, ಸಂಜೀವಕುಮಾರ ಪಾಂಚಾಳ ಇತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next