Advertisement

ಬಸವಕಲ್ಯಾಣ: ಸಿಟಿ ಬಸ್‌ ಸೌಲಭ್ಯಕ್ಕೆ ಎಬಿವಿಪಿ ಮನವಿ

11:27 AM Oct 05, 2018 | Team Udayavani |

ಬಸವಕಲ್ಯಾಣ: ನಗರದಲ್ಲಿ ಸಾರ್ವಜನಿಕರ ಅನುಕೂಲಕ್ಕಾಗಿ ಸಿಟಿ ಬಸ್‌ ಸೌಲಭ್ಯ ಒದಗಿಸಲು ಒತ್ತಾಯಿಸಿ ಗುರುವಾರ
ಅಖೀಲ ಭಾರತೀಯ ವಿದ್ಯಾರ್ಥಿ ಪರಿಷತ್‌ನಿಂದ ಈ.ಕ.ರ.ಸಾ. ಸಂಸ್ಥೆ ವ್ಯವಸ್ಥಾಪಕರಿಗೆ ಬರೆದ ಮನವಿಯನ್ನು ಉಪ ತಹಸೀಲ್ದಾರ್‌ ಶಿವಾನಂದ ಮೇತ್ರೆ ಅವರಿಗೆ ಸಲ್ಲಿಸಲಾಯಿತು.

Advertisement

ವಿದ್ಯಾರ್ಥಿಗಳು ಡಾ| ಬಿ.ಆರ್‌. ಅಂಬೇಡ್ಕರ್‌ ವೃತ್ತದಿಂದ ಹಳೆ ತಹಶೀಲ್ದಾರ್‌ ಕಚೇರಿಗೆ ಪ್ರತಿಭಟನಾ ರ್ಯಾಲಿ ಮೂಲಕ
ತೆರಳಿದರು. ನಗರದ ಶಾಲಾ-ಕಾಲೇಜುಗಳು ಪ್ರಾರಂಭವಾಗುವ ಸಮಯದಲ್ಲಿ ಬಸ್‌ಗಳ ಕೊರತೆಯಾಗುತ್ತಿದೆ.

ಇದರಿಂದ ವಿದ್ಯಾರ್ಥಿಗಳು ಸಮಸ್ಯೆ ಎದುರಿಸುವಂತಾಗಿದೆ. ಕೆಲವು ಸಲ ವಿಳಂಬವಾಗುತ್ತಿರುವುದರಿಂದ ತರಗತಿಗಳಿಂದ
ವಂಚಿತರಾಗುತ್ತಿದ್ದಾರೆ. ಆದ್ದರಿಂದ ನಗರದಲ್ಲಿ ಎರಡು ಸಿಟಿ (ಲೋಕಲ್‌) ಬಸ್‌ ಸೌಕರ್ಯ ಒದಗಿಸಬೇಕು, ಬಸ್‌ ತಂಗುದಾಣ ಸ್ಥಳಗಳಲ್ಲಿ ಕುಳಿತಿಕೊಳ್ಳಲು ವ್ಯವಸ್ಥೆ ಮಾಡಬೇಕೆಂದು ಒತ್ತಾಯಿಸಿದರು.

ನಗರದ ಪ್ರಮುಖ ಸ್ಥಳಗಳಾದ ನಾರಾಯಣಪೂರ ಕ್ರಾಸ್‌, ತ್ರಿಪೂರಾಂತ ಐ.ಬಿ., ಹಳೆಯ ತಹಶೀಲ್ದಾರ್‌ ಕಚೇರಿ
ಎದುರು ಬಸ್‌ಗಳನ್ನು ನಿಲ್ಲಿಸುವಂತೆ ಚಾಲಕರಿಗೆ ಸೂಚನೆ ನೀಡಬೇಕು. ಏಕೆಂದರೆ ಈ ಕುರಿತು ಸಾಕಷ್ಟು ಬಾರಿ ದೂರು ನೀಡಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಆದ್ದರಿಂದ ಇದರ ಬಗ್ಗೆ ಪರಿಶೀಲನೆ ನಡೆಸಿ ಕ್ರಮ ಕೈಗೊಳ್ಳಬೇಕು ಎಂದು ಮನವಿ ಮೂಲಕ ಒತ್ತಾಯಿಸಿದರು.

ಎಬಿವಿಪಿ ಪ್ರಮುಖ ಲೋಕೇಶ ಮೋಳಕೆರೆ, ತಾಲೂಕು ಸಂಚಾಲಕ ನವನಾಥ ಮೇತ್ರೆ, ಅಂಬರೀಶ್‌ ಸ್ವಾಮಿ, ನಗರ ಸಹ ಕಾರ್ಯದರ್ಶಿ ಶಂಕರ ಕಾಮಶೆಟ್ಟಿ, ಪೂಜಾ ಬಿರಾದಾರ್‌, ಸ್ವಾತಿ ಬಿರಾದಾರ್‌, ಅಮಿತ್‌, ಆದಿತ್ಯ ಶಿವಾಜಿ, ಓಂಕಾರ ಮಹಾದೇವ, ರೇಣುಕಾ, ಮಾಲಾಶ್ರೀ, ಸೀಮಾ, ಪಲ್ಲವಿ, ರೇಣುಕಾ ಮತ್ತಿತರರು ಇದ್ದರು.

Advertisement

ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ನಮ್ಮ ಸಮಸ್ಯೆಗೆ ಕೂಡಲೇ ಅಧಿಕಾರಿಗಳು ಸ್ಪಂದಿಸಬೇಕು. ಇಲ್ಲದಿದ್ದರೆ ಮುಂದಿನ
ದಿನಗಳಲ್ಲಿ ಸಂಬಂಧ ಪಟ್ಟ ಇಲಾಖೆ ಕಚೇರಿಗೆ ಎಬಿವಿಪಿಯಿಂದ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಲಾಗುವುದು.
 ಲೋಕೇಶ ಮೋಳಕೇರೆ, ಎಬಿವಿಪಿ ಪ್ರಮುಖ

Advertisement

Udayavani is now on Telegram. Click here to join our channel and stay updated with the latest news.

Next