Advertisement

Basavakalyan; ಭೀಕರ ರಸ್ತೆ ಅಪಘಾತದಲ್ಲಿ ಒಂದೇ ಕುಟುಂಬದ ನಾಲ್ವರ ಸಾವು

08:03 PM Aug 28, 2023 | Team Udayavani |

ಬಸವಕಲ್ಯಾಣ: ಹೆದ್ದಾರಿಯಲ್ಲಿ ಚಲಿಸುತಿದ್ದ ಅಪ್ಪೇ ಆಟೋಗೆ ಲಾರಿ ಡಿಕ್ಕಿಯಾಗಿ ಒಂದೇ ಕುಟುಂಬದ ನಾಲ್ವರು ಮೃತಪಟ್ಟ ಘಟನೆ ರಾಜ್ಯದ ಗಡಿಯಲ್ಲಿರುವ ತಾಲೂಕಿನ ಮನ್ನಳ್ಳಿ ಕ್ರಾಸ್ ಬಳಿ ಸೋಮವಾರ ಜರುಗಿದೆ.

Advertisement

ಮಹಾರಾಷ್ಟ್ರದ ಉಮ್ಮರ್ಗಾ ತಾಲೂಕಿನ ಸುಂದರವಾಡಿ ಗ್ರಾಮದ ನಿವಾಸಿ ಪ್ರಮೀಳಾ ಸುನಿಲ್ ಜಗದಾಳೆ (32) ಇವಳ ಪತಿ ಆಟೋ ಚಾಲಕ ಸುನೀಲ ಜಗದಾಳೆ(35), ಈತನ ತಾಯಿ ಅನುಷಾಬಾಯಿ ಮಹಾದೇವ ಜಗದಾಳೆ(65) ಹಾಗೂ ತುಳಜಾಪೂರ ತಾಲೂಕಿನ ಶಾಪೂರ ಗ್ರಾಮದ ನಿವಾಸಿ ಪೂಜಾ ಜಾಧವ ಮೃತ ದುರ್ದೈವಿಗಳಾಗಿದ್ದಾರೆ. ಗೀತಾ ಶಿವರಾಮ ಜಗದಾಳೆ ಎನ್ನುವ ಮಹಿಳೆಗೆ ಗಂಭೀರವಾಗಿ ಗಾಯಗಳಾಗಿದ್ದು, ಲಾತೂರ ಆಸ್ಪತ್ರೆ ಸಾಗಿಸಲಾಗಿದೆ.

ಪವಿತ್ರ ಶ್ರಾವಣಮಾಸದ ನಿಮಿತ್ತ ಬಸವಕಲ್ಯಾಣ ತಾಲೂಕಿನ ಚಂಡಕಾಪೂರ ಬಳಿಯ ಐತಿಹಾಸಿಕ ಕ್ಷೇತ್ರ ಅಮೃತಕುಂಡದ ಶ್ರೀ ರಾಮಲಿಂಗೇಶ್ವರ ದರ್ಶನಕ್ಕೆಂದು ಬಂದಿದ್ದರು. ದರ್ಶನ ಮುಗಿಸಿಕೊಂಡು ಮರಳಿ ಗ್ರಾಮಕ್ಕೆ ತೆರಳುವಾಗ ಮಾರ್ಗಮಧ್ಯೆ ಮನ್ನಳ್ಳಿ ಬಳಿ ಹಿಂಬದಿಯಿಂದ ವೇಗವಾಗಿ ಬಂದ ಲಾರಿ ಡಿಕ್ಕಿಯಾಗಿ ಘಟನೆ ಸಂಭವಿಸಿದ್ದು, ದೇವರ ದರ್ಶನಕ್ಕಾಗಿ ಬಂದವರು ಶಾಶ್ವತವಾಗಿ ದೇವರ ಪಾದ ಸೇರಿದ್ದಾರೆ.

ಆಟೋದಲ್ಲಿ ಒಟ್ಟು 8 ಜನ ಪ್ರಯಾಣಿಸುತಿದ್ದರು. ಓರ್ವ ಮಹಿಳೆ ಸ್ಥಳದಲ್ಲೇ ಮೃತಪಟ್ಟರೆ ಮೂವರು ಮಹಾರಾಷ್ಟ್ರದ ಉಮ್ಮರ್ಗಾ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಮೂವರಿಗೆ ಸಣ್ಣ ಪುಟ್ಟ ಗಾಯಗಳಾಗಿದ್ದು, ಪ್ರಾಣಾಪಯದಿಂದ ಪಾರಾಗಿದ್ದಾರೆ.

ಸುದ್ದಿ ತಿಳಿದ ಸಿಪಿಐ ಅಲಿಸಾಬ್, ಸಂಚಾರಿ ಠಾಣೆ ಪಿಎಸ್ಐ ಸುವರ್ಣ ಮಲಶಟ್ಟಿ ಸೇರಿದಂತೆ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಭೇಟಿನೀಡಿ ಪರಿಶೀಲಿಸಿದ್ದು, ಈ ಕುರಿತು ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

ಘಟನೆ ವೇಳೆ ಇದೇ ಮಾರ್ಗದಲ್ಲಿ ತೆರಳುತಿದ್ದ ಸ್ಥಳೀಯ ಶಾಸಕ ಶರಣು ಸಲಗರ್, ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸಲು ನೆರವು ಕಲ್ಪಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next