Advertisement

ಬಸವಕಲ್ಯಾಣ ಉಪಕದನ : ಮೂರನೇ ಸುತ್ತಿನಲ್ಲು ಕಮಲ ಕಿಲಕಿಲ, ಶರಣು ಸಲಗರ ಮುನ್ನಡೆ

10:05 AM May 02, 2021 | Team Udayavani |

ಬಸವಕಲ್ಯಾಣ : ಉಪ ಚುನಾವಣೆ ಮತ ಎಣಿಕೆ  ಕಾರ್ಯ ನಡೆಯುತ್ತಿದ್ದು, ಮೂರನೇ ಸುತ್ತು ಮುಕ್ತಾಯವಾಗಿದೆ. ಈ ಸುತ್ತಿನಲ್ಲೂ ಬಿಜೆಪಿ ಅಭ್ಯರ್ಥಿ ಶರಣು ಸಲಗರ್ ಮುನ್ನಡೆ ಸಾಧಿಸಿದ್ದಾರೆ‌.

Advertisement

ಬಿಜೆಪಿ ಅಭ್ಯರ್ಥಿ ಶರಣು ಸಲಗರ 9292 ಮತ ಪಡೆದು ಮುನ್ನಡೆ ಕಾಯ್ದುಕೊಂಡರೆ, ಕಾಂಗ್ರೆಸ್ ಅಭ್ಯರ್ಥಿ ಮಾಲಾ ನಾರಾಯಣರಾವ್ – 4848 ಮತ ಪಡೆದಿದ್ದಾರೆ.

ಇನ್ನು ಜೆಡಿಎಸ್  ಅಭ್ಯರ್ಥಿ ಸೈಯದ್ ಯಸ್ರಬ್ ಅಲಿ ಖಾದ್ರಿ 808 ಮತ ಮತ್ತು ಬಂಡಾಯ ಅಭ್ಯರ್ಥಿ ಮಲ್ಲಿಕಾರ್ಜುನ ಖೂಬಾ 618 ಮತ ಪಡೆದಿದ್ದಾರೆ.

ಮತ ಎಣಿಕೆ ಸ್ಥಳದಲ್ಲಿ ಜಿಲ್ಲಾಧಿಕಾರಿ ರಾಮಚಂದ್ರನ್ ಆರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಾಗೇಶ ಡಿ.ಎಲ್., ಜಿಲ್ಲಾ ಪಂಚಾಯತ್ ಸಿಇಓ ಡಾ.ಜಹೀರಾ ನಸೀಮ್, ಜಿಲ್ಲಾ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಡಾ.ಗೋಪಾಲ್ ಎಂ ಬ್ಯಾಕೋಡ್, ಬಸವಕಲ್ಯಾಣ ಸಹಾಯಕ ಆಯುಕ್ತರಾದ ಭುವನೇಶ ಪಾಟೀಲ, ಪೊಲೀಸ್ ಉಪಾಧೀಕ್ಷಕರಾದ ಬಸವರಾಜ ಹೀರಾ, ತಹಸೀಲ್ದಾರ ಗಂಗಾದೇವಿ‌ ಸಿ.ಎಚ್ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next