Advertisement

ಪ್ರಗತಿಪರರಿಂದಲೇ ಚಿತ್ರದುರ್ಗದ ಮುರುಘಾ ಶ್ರೀಗಳಿಗೆ ದುರ್ಗತಿ: ಯತ್ನಾಳ್‌

10:54 PM Sep 03, 2022 | Team Udayavani |

ವಿಜಯಪುರ: ಪ್ರಗತಿಪರರು ಹಾಗೂ ಬುದ್ಧಿಜೀವಿಗಳು ಎಂದು ಹೇಳಿಕೊಂಡವರೇ ದೇಶ ಹಾಗೂ ಚಿತ್ರದುರ್ಗದ ಮುರುಘಾ ಶ್ರೀಗಳನ್ನು ಹಾಳು ಮಾಡಿದ್ದು. ಈಗ ಅವರ ಮಧ್ಯೆಯೇ ಕಿಚ್ಚು ಹತ್ತಿದ್ದು, ಸಂಕಷ್ಟದಲ್ಲಿರುವ ಮುರುಘಾ ಶರಣರ ನೆರವಿಗೆ ಬರುತ್ತಿಲ್ಲ ಎಂದು ಶಾಸಕ ಬಸನಗೌಡ ಪಾಟೀಲ್‌ ಟೀಕಿಸಿದರು.

Advertisement

ನಗರದಲ್ಲಿ ಶನಿವಾರ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಪೋಕ್ಸೋ ಪ್ರಕರಣದಡಿ ಶ್ರೀಗಳು ಜೈಲು ಪಾಲಾಗಲು ಬುದ್ಧಿಜೀವಿಗಳು ಹಾಗೂ ಪ್ರಗತಿಪರರು ಎನಿಸಿಕೊಂಡವರೇ ಕಾರಣ. ಈಗ ಮಠದಿಂದ ಪಡೆದಿದ್ದ ಪ್ರಶಸ್ತಿಗಳನ್ನು ಮರಳಿಸುವುದಾಗಿ ಹೇಳುತ್ತಿದ್ದಾರೆ.

ಆಡಳಿತಾಧಿಕಾರಿ ನೇಮಿಸಿ ಸಾವಿರಾರು ಕೋಟಿ ರೂ. ಆಸ್ತಿ ಹೊಂದಿರುವ ಮುರುಘಾ ಮಠವನ್ನು ಉಳಿಸಲು ಸರಕಾರ ಕೂಡಲೇ ದಕ್ಷ ಆಡಳಿತಾಧಿಕಾರಿಯನ್ನು ನೇಮಿಸಬೇಕು. ಮುಂದಿನ ದಿನಗಳಲ್ಲಿ ವೀರಶೈವ ಲಿಂಗಾಯತ ಸಮಾಜ ಒಳ್ಳೆಯ ಮಠಾಧೀಶರನ್ನು ನೇಮಿಸಬೇಕು. ಇಷ್ಟೆಲ್ಲ ಆದ ಮೇಲೂ ಇಂಥ ಶ್ರೀಗಳನ್ನು ಮಠದಲ್ಲಿಟ್ಟುಕೊಳ್ಳಲು ಸಾಧ್ಯವಿಲ್ಲ ಎಂದರು.

ಮಠದಲ್ಲಿ ಟಿಪ್ಪು ಮೂರ್ತಿ
ಹಿಂದೂ ಧರ್ಮದ ಬಗ್ಗೆ ನಿರಂತರ ಹಗುರವಾಗಿ ಮಾತನಾಡುತ್ತಿದ್ದ ಮುರುಘಾ ಶರಣರು ವೀರಶೈವ ಮಠದಲ್ಲಿ ಮತಾಂಧ ಟಿಪ್ಪು ಸುಲ್ತಾನ್‌ ಮೂರ್ತಿಯನ್ನು ಇರಿಸಿದ್ದರು. ಗೋಮಾತೆ ಬಗ್ಗೆಯೂ ಅವಹೇಳನಕಾರಿಯಾಗಿ ಮಾತನಾಡಿದ್ದರು ಎಂದು ಟೀಕಿಸಿದರು.

ಚಿತ್ರದುರ್ಗ ಆಳಿದ ಮದಕರಿ ನಾಯಕರ ವಂಶದವರು ಮಠಕ್ಕೆ ಸಾವಿರಾರು ಎಕರೆ ಜಮೀನು ನೀಡಿದ್ದಾರೆ. ಮದಕರಿ ನಾಯಕರ ಕೋಟೆಗೆ ಟಿಪ್ಪು ಸುಲ್ತಾನ್‌ ತಂದೆ ಹೈದರಲಿ ದಾಳಿ ಮಾಡಿ ಲೂಟಿ ಮಾಡಿದ್ದ. ಟಿಪ್ಪು ಸುಲ್ತಾನ್‌ ಹೊಗಳಿದವರು ಯಾರೂ ಉತ್ತಮವಾಗಿಲ್ಲ. ಟಿಪ್ಪು ಸಿನೆಮಾ ಮಾಡಿದ ವ್ಯಕ್ತಿ ಪೆಂಡಾಲ್‌ ಸುಟ್ಟು ನಷ್ಟ ಅನುಭವಿಸಿದ್ದಾನೆ. ವಿದೇಶದಿಂದ ಟಿಪ್ಪು ಖಡ್ಗವನ್ನು ತಂದಿದ್ದ ವಿಜಯ ಮಲ್ಯ ದಿವಾಳಿಯಾಗಿ ದೇಶ ತೊರೆದಿದ್ದಾನೆ. ಟಿಪ್ಪು ಜಯಂತಿ ಮಾಡಿದ್ದ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದರೂ ವಿಧಾನಸಭೆ ಚುನಾವಣೆಯಲ್ಲಿ ತವರು ಕ್ಷೇತ್ರದಲ್ಲಿ 30 ಸಾವಿರ ಮತಗಳ ಅಂತರದಲ್ಲಿ ಸೋತಿದ್ದಾರೆ. ಹೀಗಾಗಿ ಟಿಪ್ಪು ಗುಣಗಾನ ಮಾಡುವುದನ್ನು ನಿಲ್ಲಿಸದವರಿಗೆ ಭವಿಷ್ಯದಲ್ಲಿ ಇದೇ ಗತಿ ಬರಲಿದೆ ಎಂದು ಎಚ್ಚರಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next