Advertisement

ಸಿ.ಎಂ. ನನಗೆ ಕರೆ ಮಾಡಿಲ್ಲ, ನನ್ನ ಕರೆನ್ಸಿ ಖಾಲಿಯಾಗಿದೆ-ಯತ್ನಾಳ

09:40 PM Jan 12, 2021 | Suhan S |

ವಿಜಯಪುರ : ಸಂಪುಟ ವಿಸ್ತರಣೆ ಕಾರ್ಯಕ್ರಮಕ್ಕೆ ನನಗೆ ಮುಖ್ಯಮಂತ್ರಿಯಿಂದ ಕರೆ ಬಂದಿಲ್ಲ, ನನ್ನ ಕರೆನ್ಸಿ ಖಾಲಿಯಾಗಿದೆ. ಇಷ್ಟಕ್ಕೂ ಬೆಂಗಳೂರಿನಲ್ಲಿ ನನಗೇನೂ ಕೆಲಸವಿಲ್ಲ, ಹೀಗಾಗಿ ನಾನು ಅಲ್ಲಿಗೆ ಹೋಗುತ್ತಲೂ ಇಲ್ಲ ಎಂದು ವಿಜಯಪುರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಪ್ರತಿಕ್ರಿಯಿಸಿದ್ದಾರೆ.

Advertisement

ಕಳೆದ ಹಲವು ತಿಂಗಳಿಂದ ತಮ್ಮದೇ ಸರ್ಕಾರದ ವಿರುದ್ಧ ಹರಿಹಾಯುತ್ತಿದ್ದ ಅವರು, ಕಳೆದ 24 ಗಂಟೆಯಿಂದ ಮೌನಕ್ಕೆ ಶರಣಾಗಿದ್ದಾರೆ. ಸೋಮವಾರ ಪತ್ರಕರ್ತರಿಗೆ ಪ್ರತಿಕ್ರಿಯೆ ನೀಡಲು ನಿರಾಕರಿಸಿದ್ದ ಅವರು, ಮಂಳಗವಾರ ನಗರದಲ್ಲಿ ಪತ್ರಕರ್ತರು ಸಂಪುಟ ವಿಸ್ತರಣೆ ಮುಖ್ಯಮಂತ್ರಿಗಳಿಂದ ಕರೆ ಬಂದಿದೆಯೇ ಎಂದು ಕೇಳಿದಾಗ ನನ್ನ ಕರೆನ್ಸಿ ಖಾಲಿ ಆಗಿದೆ, ಮುಖ್ಯಮಂತ್ರಿ ನನಗೇನೂ ಕರೆ ಮಾಡಿಲ್ಲ ಎಂದರು.

 

ಇದನ್ನೂ ಓದಿ :  ಕಾಂಗ್ರೆಸ್‌ಗೆ ಗಾಂಧಿ, ಅಂಬೇಡ್ಕರ್ ಶಾಪ ತಟ್ಟಿದೆ: ನಳೀನ್ ಕುಮಾರ್ ಕಟೀಲ್

Advertisement

Udayavani is now on Telegram. Click here to join our channel and stay updated with the latest news.

Next