Advertisement

ಅಲ್ಪಸಂಖ್ಯಾತರ ಉದ್ದಾರ ಬಿಟ್ಟು ರೈತರ ಅಭಿವೃದ್ಧಿಗೆ ಅನುದಾನ ನೀಡಿ : ಯತ್ನಾಳ

08:45 PM Apr 26, 2022 | Team Udayavani |

ವಿಜಯಪುರ : ಜನರನ್ನು ಧರಿದ್ರ ಮಾಡುವ ಅನ್ನಭಾಗ್ಯ, ತಾಳಿಭಾಗ್ಯದಂಥ ಯೋಜನೆಗಳನ್ನು ಕೈಬಿಟ್ಟು, ಕೃಷ್ಣಾ ಮೇಲ್ದಂಡೆ ಯೋಜನೆಯನ್ನು ಮುಗಿಸಲು ಅಗತ್ಯದ ಅನುದಾನ ನೀಡಿ ಎಂದು ಬಸವರಾಜ ಬೊಮ್ಮಾಯಿ ಅವರಿಗೆ ವಿಜಯಪುರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಸಲಹೆ ನೀಡಿದರು.

Advertisement

ಕೊಡಗಾನೂರ ಗ್ರಾಮದಲ್ಲಿ ಬೂದಿಹಾಳ-ಪೀರಾಪೂರ ಏತ ನೀರಾವರ ಯೋಜನೆ ಪೈಪ್‍ಲೈನ್ ಕಾಮಗಾರಿಗೆ ಚಾಲನೆ ನೀಡುವ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಅಲ್ಪಸಂಖ್ಯಾತರನ್ನು ಓಲೈಸುವ ಕಾರ್ಯಕ್ರಮ ಕೈಬಿಡಿ. ಅವರೇನು ಪಾಕಿಸ್ಥಾನದಲ್ಲಿಲ್ಲ, ಭಾರತದಲ್ಲೇ ನಮ್ಮೊಂದಿಗೆ ಇದ್ದಾರೆ.

ಅವರ ಉದ್ಧಾರಕ್ಕೆ 2 ಸಾವಿರ ಕೋಟಿ ರೂ. ಕೊಡುವ ಬದಲು ಅದೇ ಹಣವನ್ನು ರೈತರ ಅಭಿವೃದ್ಧಿಯ ನೀರಾವರಿಗೆ ಬಳಸಿ. ಇದರಿಂದ ನೀವು ಯಾವ ಭಾಗ್ಯ ಕೊಡುವುದು ಬೇಡ. ರೈತರಿಗೆ ನೀರಾವರಿಗಾಗಿ ಅಗತ್ಯ ಹಣ ನೀಡಿ, ಯೋಜನೆ ಮಾಡಿದರೆ ರೈತರೇ ನಿಮಗೆ ಹಣ ಕೊಡುತ್ತಾರೆ ಎಂದು ಆಗ್ರಹಿಸಿದರು.

ಇದನ್ನೂ ಓದಿ : ಗುಣಮುಖವಾಗದ ಕಾಯಿಲೆ, ಮದುವೆಯಾಗದ ಕೊರಗು : ನೇಣು ಬಿಗಿದು ಯುವಕ ಆತ್ಮಹತ್ಯೆ

Advertisement

Udayavani is now on Telegram. Click here to join our channel and stay updated with the latest news.

Next