Advertisement

ಸಂಕ್ರಾಂತಿಗೆ ರಾಜ್ಯ ಸಂಪುಟ ಪುನಾರಚನೆ : ಯತ್ನಾಳ್

10:01 PM Dec 30, 2021 | Team Udayavani |

ವಿಜಯಪುರ:  ಬರುವ ಸಂಕ್ರಾಂತಿಗೆ ರಾಜ್ಯ ಸಂಪುಟ ಪುನಾರಚನೆ ಆಗಲಿದೆ. ಧ್ವಜಾರೋಹಣಕ್ಕೆ ಮಾತ್ರ ಸೀಮಿತವಾಗಿರುವ ಸಚಿವರಿಗೆ ಕೋಕ್ ಸಿಗಲಿದೆ ಎಂದು ವಿಜಯಪುರ ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಮತ್ತೊಂದು ಸಂಕ್ರಾಂತಿ ಬಾಂಬ್ ಸಿಡಿಸಿದ್ದಾರೆ‌.

Advertisement

ಗುರುವಾರ ನಗರದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಜಿಲ್ಲೆಯ ಅಭಿವೃದ್ಧಿ ಮರೆತು ಸಚಿವರ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಗುಪ್ತಚರ ಮಾಹಿತಿ ಪಡೆದಿದ್ದಾರೆ. ಹೀಗಾಗಿ ಬರುವ ಸಂಕ್ರಾಂತಿಗೆ ಸಂಪುಟ ಪುನಾರಚನೆ ಆಗಲಿದ್ದು, ಕೇವಲ ಧ್ವಜಾರೋಹಣ ಮಂತ್ರಿಗಳನ್ನು ಕೈಬಿಡಲಾಗುತ್ತದೆ ಎಂದರು.

ಈ ಹಿಂದೆಯೂ ಸಂಕ್ರಾಂತಿಗೆ ದೊಡ್ಡ ವಿಕೇಟ್ ಬೀಳುವುದಾಗಿ ನಾನು ಹೇಳಿದಂತೆ ಆಗಿದೆ. ಈಗಲೂ ಸಂಕ್ರಾಂತಿಗೆ ವಿಜಯಪುರ ಜಿಲ್ಲೆಗೆ ಹೊಸ ಮಂತ್ರಿ ಬರಲಿದ್ದಾರೆ ಎಂದು ಸಂಕ್ರಾಂತಿ ಭವಿಷ್ಯ ನುಡಿದಿದ್ದಾರೆ.

ರಾಜ್ಯ ಗೃಹ ಖಾತೆ ಗಟ್ಟಿ ನಿರ್ಧಾರ ಕೈಗೊಳ್ಳುವ ಶಕ್ತಿ ಇರುವ ಸಚಿವರಿಗೆ ನೀಡಬೇಕು ಎಂದು ಆಗ್ರಹಿಸಿದ ಯತ್ನಾಳ, ಮುಂಬರುವ ಚುನಾವಣೆ ದೃಷ್ಟಿಯಿಂದ ಪಕ್ಷದ ಬಲವರ್ಧನೆ ದೃಷ್ಟಿಯಿಂದ ಪ್ರಧಾನಿ ಕ್ರಮ ಕೈಗೊಳ್ಳಲಿದ್ದಾರೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next