Advertisement

Bantwal: ಕರ್ತವ್ಯಲೋಪ ಆರೋಪದಲ್ಲಿ ಶಿಕ್ಷಕರೊಬ್ಬರ ವಿರುದ್ಧ ಬಿಇಒಗೆ ದೂರು

09:56 PM Jun 07, 2024 | Team Udayavani |

ಬಂಟ್ವಾಳ: ದಡ್ಡಲಕಾಡು ಸರಕಾರಿ ಆಂಗ್ಲ ಮಾಧ್ಯಮ ಪೌಢಶಾಲೆಯ ಶಿಕ್ಷಕರೊಬ್ಬರು ವಿದ್ಯಾರ್ಥಿಗಳಿಗೆ ದಂಡನೆ ಹಾಗೂ ಸಹಶಿಕ್ಷಕರಿಗೆ ಮಾನಸಿಕ ಕಿರುಕುಳ ನೀಡುವ ಮೂಲಕ ಕರ್ತವ್ಯಲೋಪ ಎಸಗಿದ್ದಾರೆ ಎಂದು ಆರೋಪಿಸಿ ಶಾಲಾ ಎಸ್‌ಡಿಎಂಸಿಯು ಬಂಟ್ವಾಳ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ದೂರು ನೀಡಿದೆ.

Advertisement

ಶಾಲೆಯಲ್ಲಿ ಕಳೆದ 2 ವರ್ಷಗಳಿಂದ ಕರ್ತವ್ಯ ನಿರ್ವಹಿಸುತ್ತಿರುವ ಶಿಕ್ಷಕ ರಮಾನಂದ ಅವರು ಹಲವಾರು ಸಂಘ ಸಂಸ್ಥೆಗಳಲ್ಲಿ ತೊಡಗಿಕೊಂಡು ಶಾಲೆಯಲ್ಲಿರುವ ಬದಲು ಅಲ್ಲೇ ಕಾರ್ಯಪ್ರವೃತ್ತರಾಗಿರುತ್ತಾರೆ. ಜತೆಗೆ ದಾಖಲೆಗಳನ್ನು ಸೃಷ್ಟಿಸಿ ಪ್ರಶಸ್ತಿಗಾಗಿ ಅದರ ಹಿಂದೆ ಕಾರ್ಯೋನ್ಮುಖರಾಗಿದ್ದಾರೆ.

ವಿದ್ಯಾರ್ಥಿಗಳಿಗೆ ಕೆನ್ನೆಗೆ ಬಡಿಯುವುದು, ಅವಾಚ್ಯ ಶಬ್ದಗಳ ನಿಂದನೆ, ಜಾತಿ ನಿಂದನೆ, ಸಹಶಿಕ್ಷಕರಿಗೆ ತಪ್ಪು ಮಾಡದೇ ಇದ್ದರೂ ಆರೋಪ ಹೊರಿಸಿ ಕೀಳು ಮಟ್ಟದ ಶಬ್ದಗಳಿಂದ ಬೈಯ್ಯುತ್ತಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.

ಅವರ ಕರ್ತವ್ಯಲೋಪದ ಕುರಿತು ಶಿಕ್ಷಕಿಯೊಬ್ಬರು ಶಾಲಾ ದತ್ತು ಸಂಸ್ಥೆ ಶ್ರೀದುರ್ಗಾ ಚಾರಿಟೆಬಲ್‌ ಟ್ರಸ್ಟ್‌ ಅಧ್ಯಕ್ಷರಿಗೂ ದೂರು ನೀಡಿದ್ದು, ಕರ್ತವ್ಯಲೋಪ ಎಸಗಿದ ಶಿಕ್ಷಕರನ್ನು ವರ್ಗಾವಣೆ ಮಾಡುವಂತೆ ಬಿಇಒ ಅವರಲ್ಲಿ ಒತ್ತಾಯಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next