Advertisement

Bantwal ಪರಪ್ಪು ಮಸೀದಿ ಅಧ್ಯಕ್ಷರಿಗೆ ಹಲ್ಲೆ

10:07 PM Sep 02, 2023 | Team Udayavani |

ಬಂಟ್ವಾಳ: ಇರಾ ಗ್ರಾಮದ ಪರಪ್ಪು ಬದ್ರಿಯಾ ಜುಮ್ಮಾ ಮಸೀದಿಗೆ ಆಗಮಿಸಿದ ತಂಡವೊಂದು ಮಸೀದಿಯ ಅಧ್ಯಕ್ಷರಿಗೆ ಹಲ್ಲೆ ನಡೆಸಿದ ಘಟನೆ ನಡೆದಿದೆ.

Advertisement

ಇರಾ ಗ್ರಾಮ ನಿವಾಸಿ ಎಸ್‌.ಎ.ಅಬ್ದುಲ್ಲಾ ಹಲ್ಲೆಗೊಳಗಾದವರು. ಅವರು ಮಸೀದಿಯಲ್ಲಿ ಇತರ ಪದಾಧಿಕಾರಿಗಳ ಜತೆ ಮಾತನಾಡುತ್ತಿದ್ದ ಸಮಯ ಆರೋಪಿಗಳಾದ ಸಮದ್‌, ನಾಸೀರ್‌ಎರ್ಮಾಜೆ, ಫಾರೂಕ್‌, ಮುಸ್ತಫಾ ಪರ್ಲಡ್ಕ, ರಹೀಮ್‌ ಪರ್ಲಡ್ಕ ಮತ್ತು ಮೊಹಮ್ಮದ್‌ ಅವಾಚ್ಯ ಶಬ್ದಗಳಿಂದ ಬೈದು ಬೆದರಿಕೆ ಹಾಕಿ, ಹಲ್ಲೆಗೆ ಮುಂದಾಗಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.

ಬಂಟ್ವಾಳ ಗ್ರಾಮಾಂತರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next