Advertisement

ಬಂಟ್ವಾಳ: ನೆರೆ ಪೀಡಿತ ಸ್ಥಳಕ್ಕೆ  ಸಚಿವರ ಭೇಟಿ

03:52 PM Aug 18, 2018 | |

ಬಂಟ್ವಾಳ: ಬಂಟ್ವಾಳ ತಾಲೂಕಿನ ನೆರೆ ಪೀಡಿತ ವಿವಿಧ ಪ್ರದೇಶಗಳಿಗೆ ನಗರಾಭಿವೃದ್ಧಿ ಸಚಿವ ಯು.ಟಿ. ಖಾದರ್‌ ಆ. 17ರಂದು ಭೇಟಿ ನೀಡಿ ಪರಿಶೀಲನೆ ನಡೆಸಿದರು. ನೆರೆ ನೀರು ನುಗ್ಗಿ ಹಾನಿಗೀಡಾದ ವಸತಿ ಪ್ರದೇಶಗಳನ್ನು ವೀಕ್ಷಿಸಿದರು. ಈಗಾಗಲೇ ಜಿಲ್ಲಾಡಳಿತ ನೆರೆ ಪೀಡಿತ ಪ್ರದೇಶಗಳ ಜನರಿಗೆ ತಾತ್ಕಾಲಿಕ ಬದಲಿ ವ್ಯವಸ್ಥೆ ಕಲ್ಲಿಸಿದ್ದು, ಸಂತ್ರಸ್ತರಿಗೆ ಯಾವುದೇ ತೊಂದರೆ ಬಾರದಂತೆ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದ್ದಾಗಿ ಪತ್ರಕರ್ತರಲ್ಲಿ ತಿಳಿಸಿದರು.

Advertisement

ಮಳೆ ಕ್ಷೀಣಿಸಿದ ಅನಂತರವೇ ನೆರೆ ಪೀಡಿತ ಸಂತ್ರಸ್ತರಿಗೆ ಪರಿಹಾರ ನೀಡುವ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು. ಅಧಿಕಾರಿಗಳು ಸಂತ್ರಸ್ತರ ಪಟ್ಟಿ ಬಂಟ್ವಾಳ: ನೆರೆ ಪೀಡಿತ ಸ್ಥಳಕ್ಕೆ ಸಚಿವರ ಭೇಟಿ ತಯಾರಿಸಿಕೊಂಡಿದ್ದು, ಇನ್ನಷ್ಟು ವಿವರಗಳ ಸಂಗ್ರಹದ ಬಳಿಕ ಅರ್ಹ ಕ್ರಮದ ಕುರಿತು ಚರ್ಚಿಸುವುದಾಗಿ ತಿಳಿಸಿದರು. ಡಿಸಿ ಶಶಿಕಾಂತ್‌ ಸೆಂಥಿಲ್‌, ತಹಶೀಲ್ದಾರ್‌ ಪುರಂದರಹೆಗ್ಡೆ, ಮುಖ್ಯಾಧಿಕಾರಿ ರೇಖಾ ಜೆ. ಶೆಟ್ಟಿ, ವಾರ್ತಾಧಿಕಾರಿ ಖಾದರ್‌ ಶಾ, ಸಿದ್ದೀಕ್‌ ಬೋಗೋಡಿ, ರಫೀಕ್‌ ಮೊದಲಾದವರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next