Advertisement

Bantwal ಅಕ್ರಮ ಸಾಗಾಟದ ಮರಳು ವಶ; ಪ್ರಕರಣ ದಾಖಲು

12:42 AM May 20, 2024 | Team Udayavani |

ಬಂಟ್ವಾಳ: ಬಂಟ್ವಾಳ ನಗರ ಪೊಲೀಸರು ಮೇ 18ರಂದು ರಾತ್ರಿ ಬಿ.ಸಿ.ರೋಡಿನ ಸರ್ಕಲ್‌ ಬಳಿ ವಾಹನ ತಪಾಸಣೆ ನಡೆಸುತ್ತಿದ್ದಾಗ ಅಕ್ರಮ ಮರಳು ಸಾಗಾಟ ಪತ್ತೆಯಾಗಿದೆ. ಮರಳು ಸಹಿತ ಲಾರಿಯನ್ನು ವಶಪಡಿಸಿಕೊಂಡು ಲಾರಿ ಚಾಲಕ ಹಾಗೂ ಮಾಲಕನ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.

Advertisement

ಚಾಲಕ ಬೋಳಂತೂರು ನಿವಾಸಿ ಮೊಹಮ್ಮದ್‌ ಮನ್ಸೂರು ಹಾಗೂ ಬಿ.ಸಿ.ರೋಡು ಕೈಕಂಬ ನಿವಾಸಿ ಅಶ್ರಫ್‌ ಆರೋಪಿಗಳಾಗಿದ್ದಾರೆ. ನಗರ ಠಾಣೆಯ ಎಎಸ್‌ಐ ಬಶೀರ್‌ ಸಿಬಂದಿಯ ಜತೆ ವಾಹನ ತಪಾಸಣೆ ನಡೆಸುವ ಸಂದರ್ಭ ಪರವಾನಿಗೆ ರಹಿತವಾಗಿ ಲಾರಿಯಲ್ಲಿ 3 ಯೂನಿಟ್‌ ಮರಳು ಸಾಗಿಸುತ್ತಿರುವುದು ಪತ್ತೆಯಾಗಿದೆ.

ಚಾಲಕನನ್ನು ವಿಚಾರಿಸಿದಾಗ ಮರಳನ್ನು ವಳಚ್ಚಿಲ್‌ನ ನೇತ್ರಾವತಿ ನದಿಯಿಂದ ಅಕ್ರಮವಾಗಿ ತೆಗೆದು ಮಾರಾಟ ಮಾಡಲು ಸಾಗಿಸುತ್ತಿರುವುದಾಗಿ ತಿಳಿಸಿದ್ದಾನೆ.

Advertisement

Udayavani is now on Telegram. Click here to join our channel and stay updated with the latest news.

Next