Advertisement

Bantwal ತಲವಾರು ಹಿಡಿದು ಭಯ ಸೃಷ್ಟಿಸಿದ್ದ ತಂಡ; ಪ್ರಕರಣ ದಾಖಲು

11:33 PM Jun 10, 2024 | Team Udayavani |

ಬಂಟ್ವಾಳ: ಬಡಗಬೆಳ್ಳೂರಿನ ಸಾರ್ವಜನಿಕ ಸ್ಥಳದಲ್ಲಿ ತಂಡವೊಂದು ತಲವಾರು ಹಿಡಿದುಕೊಂಡು ಜನತೆಗೆ ಭಯವನ್ನುಂಟು ಮಾಡುತ್ತಿದೆ ಎಂಬ ದೂರಿನ ಮೇರೆಗೆ ಬಂಟ್ವಾಳ ಗ್ರಾಮಾಂತರ ಪೊಲೀಸರು ದಾಳಿ ನಡೆಸಿದಾಗ ಆರೋಪಿಗಳು ಪರಾರಿಯಾದ ಘಟನೆ ಜೂ. 9ರಂದು ಸಂಜೆ ನಡೆದಿದೆ.

Advertisement

ಆರೋಪಿಗಳಾದ ಭೋಜರಾಜ, ವಿನೋದ್‌, ವಿವೇಕ್‌, ರಕ್ಷಿತ್‌, ರಕ್ಷಕ್‌ ಅವರು ತಲವಾರು ಹಿಡಿದುಕೊಂಡು ಜನತೆಗೆ ಭಯವನ್ನುಟ್ಟು ಮಾಡುತ್ತಿದ್ದರು. ಹೀಗಾಗಿ ಬಂಟ್ವಾಳ ಗ್ರಾಮಾಂತರ ಠಾಣಾ ಪಿಎಸ್‌ಐ ಹರೀಶ್‌ ಎಂ.ಆರ್‌. ಅವರ ತಂಡ ದಾಳಿ ನಡೆಸಿದ್ದು, ಆರೋಪಿಗಳು ಪೊಲೀಸ್‌ ಜೀಪನ್ನು ಕಂಡು ಪರಾರಿಯಾಗಿದ್ದಾರೆ.

ಪೊಲೀಸರು ಅಲ್ಲೇ ಪಕ್ಕದಲ್ಲಿ ನಿಂತಿದ್ದ ಆಟೋ ರಿಕ್ಷಾವನ್ನು ಪರಿಶೀಲಿಸಿದಾಗ ತಲವಾರು ಪತ್ತೆಯಾಗಿದ್ದು, ಆರೋಪಿಗಳ ವಿರುದ್ಧ ಬಂಟ್ವಾಳ ಗ್ರಾಮಾಂತರ ಠಾಣೆಯಲ್ಲಿ ಭಾರತೀಯ ಶಸ್ತಾಸ್ತ್ರ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.

 

Advertisement

Udayavani is now on Telegram. Click here to join our channel and stay updated with the latest news.

Next