Advertisement

ಬ್ಯಾಂಕ್‌ ಸಖೀ ಯೋಜನೆ ಮಹಿಳೆಯರಿಗೆ ಪೂರಕ

05:28 PM Dec 19, 2021 | Team Udayavani |

ರಾಯಚೂರು: ಸರ್ಕಾರ ಪ್ರತಿ ಹಳ್ಳಿಗೂ ಬ್ಯಾಂಕಿಂಗ್‌ ವ್ಯವಸ್ಥೆ ಕಲ್ಪಿಸುವ ಉದ್ದೇಶದಿಂದ ಬ್ಯಾಂಕ್‌ ಸಖೀ ಯೋಜನೆ ಆರಂಭಿಸಿದ್ದು, ಇದು ಗ್ರಾಮೀಣ ಭಾಗದ ಮಹಿಳೆಯರ ಬೆಳವಣಿಗೆಗೆ ಸಹಕಾರಿಯಾಗಲಿದೆ ಎಂದು ಜಿಪಂ ಮುಖ್ಯ ಲೆಕ್ಕಾಧಿಕಾರಿ ನಾಗರಾಜ್‌ ನಾಯಕ ತಿಳಿಸಿದರು.

Advertisement

ನಗರದ ಜಿಪಂ ಸಭಾಂಗಣದಲ್ಲಿ ಶನಿವಾರ ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಅಭಿಯಾನ ಯೋಜನೆಯಡಿ ಬ್ಯಾಂಕ್‌ ಸಖೀಗಳಿಗೆ ಹಮ್ಮಿಕೊಂಡಿದ್ದ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.

ಸರ್ಕಾರ ಮಹಿಳೆಯರಿಗೆ ಉದ್ಯೋಗ ಕಲ್ಪಿಸುತ್ತದೆ. ಈ ಯೋಜನೆಯಡಿ ಗ್ರಾಮದ ಮಹಿಳೆಯರು ಈಗ ಡಿಜಿಟಲ್‌ ಮಾಲ್‌ಗ‌ಳ ಮೂಲಕ ಜನರಿಗೆ ಮನೆಯಲ್ಲಿ ಬ್ಯಾಂಕಿಂಗ್‌ ಸೇವೆಗಳನ್ನು ಒದಗಿಸಲು ಮತ್ತು ಹಣದ ವಹಿವಾಟು ನಡೆಸಲು ಸಹ ಸಾಧ್ಯ ಎಂದರು.

ಈ ಯೋಜನೆಯಡಿ ಕೆಲಸ ಮಾಡುವ ಎಲ್ಲ ಬ್ಯಾಂಕಿಂಗ್‌ ಸಹವರ್ತಿಗಳು ಮನೆ-ಮನೆಗೆ ತೆರಳಿ ಅಲ್ಲಿ ಸರ್ಕಾರ ನಡೆಸುವ ಯೋಜನೆಗಳು ಮತ್ತು ಬ್ಯಾಂಕಿಂಗ್‌ ಸೌಲಭ್ಯಗಳ ಬಗ್ಗೆ ತಿಳಿಸುತ್ತಾರೆ. ಅಷ್ಟೇ ಅಲ್ಲದೆ ಗ್ರಾಮಸ್ಥರ ಬ್ಯಾಂಕ್‌ ಗೆ ಸಂಬಂಧಿಸಿದ ಪ್ರಮುಖ ಕಾರ್ಯಗಳನ್ನೂ ಮಾಡಲಾಗುವುದು. ಗ್ರಾಮೀಣ ಪ್ರದೇಶದಲ್ಲಿ ಬ್ಯಾಂಕಿಂಗ್‌ ಸಖೀಯನ್ನು ನಿಯೋಜಿಸಲು ಸರ್ಕಾರ ನಿರ್ಧರಿಸಿದೆ. ಈ ಚಟುವಟಿಕೆಗಳು ಜನರಿಗೆ ಬ್ಯಾಂಕಿಂಗ್‌ನಲ್ಲಿ ಸಹಾಯ ಮಾಡುತ್ತದೆ. ಮೊದಲ ಹಂತದಲ್ಲಿ ಮಹಿಳೆಯರಿಗೆ ಈ ಯೋಜನೆಯಡಿ ಉದ್ಯೋಗ ನೀಡಲಾಗುವುದು. ಪ್ರತಿ ಹಳ್ಳಿಗೆ ಬ್ಯಾಂಕಿಂಗ್‌ ಸೌಲಭ್ಯ ಕಲ್ಪಿಸುವುದೇ ಈ ಯೋಜನೆ ಉದ್ದೇಶವಾಗಿದೆ ಎಂದರು.

ಲೀಡ್‌ ಬ್ಯಾಂಕ್‌ ಮ್ಯಾನೇಜರ್‌ ಬಾಬು ಬಳಗಾನೂರು, ಎಸ್‌ಬಿಐ ನಿರ್ದೇಶಕ ಬಾಬುರಾವ್‌ ಬೊರ್ಲೆ, ಸಿಎಸ್‌ಸಿ ಜಿಲ್ಲಾ ವ್ಯವಸ್ಥಾಪಕ ನಜೀಮ್‌ ಸಾಬ್‌, ಎನ್‌ಆರ್‌ ಎನ್‌ಎಂ ಜಿಲ್ಲಾ ವ್ಯವಸ್ಥಾಪಕ ವಿಜಯ ಕುಮಾರ್‌, ಜಿಲ್ಲಾ ಕಾರ್ಯಕ್ರಮ ವ್ಯವಸ್ಥಾಪಕ ಇಸ್ಮಾಯಿಲ್‌, ಸಿಎಸ್‌ಸಿ ಜಿಲ್ಲಾ ಸಂಯೋಜಕ ಪ್ರಸನ್ನ ಕುಮಾರ್‌ ಗಟ್ಟು, ಜಿಲ್ಲಾ ವ್ಯವಸ್ಥಾಪಕ ಶ್ರೀಕಾಂತ್‌ ಬನ್ನಿಗೋಳ, ಬ್ಯಾಂಕ್‌ ಸಖೀಯರು ಪಾಲ್ಗೊಂಡಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next