Advertisement

ವೇತನ ಪರಿಷ್ಕರಣೆ ಆಗ್ರಹಿಸಿ ಬ್ಯಾಂಕ್‌ ನೌಕರರ ಮುಷ್ಕರ: ದ.ಕ

10:46 AM May 31, 2018 | Team Udayavani |

ಮಂಗಳೂರು/ಉಡುಪಿ: ವೇತನ ಪರಿಷ್ಕರಣೆ ಆಗ್ರಹಿಸಿ ಬ್ಯಾಂಕ್‌ ನೌಕರರು ಎರಡು ದಿನಗಳ ಕಾಲ ಹಮ್ಮಿಕೊಂಡ ಮುಷ್ಕರದಿಂದಾಗಿ ದ.ಕ. ಮತ್ತು ಉಡುಪಿ ಜಿಲ್ಲೆಯಲ್ಲಿ ಎಲ್ಲ ಬ್ಯಾಂಕ್‌ಗಳ ವ್ಯವಹಾರ ಬುಧವಾರ ಸಂಪೂರ್ಣ ಸ್ಥಗಿತಗೊಂಡಿತ್ತು.

Advertisement

ಅ. ಭಾ. ಬ್ಯಾಂಕ್‌ ಯೂನಿಯನ್‌ ಕರೆ ನೀಡಿದ್ದ ಮುಷ್ಕರಕ್ಕೆ ಜಿಲ್ಲೆಯಲ್ಲಿ ಉತ್ತಮ ಸ್ಪಂದನೆ ವ್ಯಕ್ತವಾಗಿದ್ದು, ಸ್ಟೇಟ್‌ಬ್ಯಾಂಕ್‌ ಬಳಿಯಲ್ಲಿ ಸುಮಾರು 750ಕೂಚR ಹೆಚ್ಚು ಬ್ಯಾಂಕ್‌ ನೌಕರರು ಬುಧವಾರ ಪ್ರತಿಭಟನೆ ನಡೆಸಿದರು.
ದ.ಕ. ಜಿಲ್ಲಾ ಬ್ಯಾಂಕ್‌ ನೌಕರರ ಸಂಘದ ಅಧ್ಯಕ್ಷ ಪಿ. ಆರ್‌. ಕಾರಂತ, ಅ.ಭಾ. ಬ್ಯಾಂಕ್‌ ಅಧಿಕಾರಿಗಳ ಸಂಘದ ಕಾರ್ಯದರ್ಶಿ ಜಯ ಪ್ರಕಾಶ್‌ ಶೆಟ್ಟಿ, ಕಾರ್ಯಕ್ರಮ ಸಂಚಾಲಕ ವಿನ್ಸೆಂಟ್‌ ಡಿ’ಸೋಜಾ ಮುಷ್ಕರದ ಕುರಿತು ಮಾತನಾಡಿದರು. ಮುಷ್ಕರವು ಗುರುವಾರವೂ ಮುಂದುವರಿಯಲಿದ್ದು, ಪಾಂಡೇಶ್ವರದ ಕಾರ್ಪೊರೇಶನ ಬ್ಯಾಂಕ್‌ ಮುಖ್ಯ ಕಚೇರಿ ಮುಂಭಾಗ ನೌಕರರು ಮುಷ್ಕರ ನಡೆಸಲಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next