Advertisement

ಜೆ.ಪಿ.ನಗರ : ಬರ್ತ್‌ ಡೇ ಮುಗಿಸಿ ಬರುತ್ತಿದ್ದ ಯುವಕನ ಕೊಚ್ಚಿ ಕೊಲೆ 

12:35 PM Aug 16, 2018 | Team Udayavani |

ಬೆಂಗಳೂರು: ನಗರದ ಮರಿಯಪ್ಪನಪಾಳ್ಯದಲ್ಲಿ  ಬುಧವಾರ ರಾತ್ರಿ ಯುವಕನೊಬ್ಬನನ್ನು ಅಪರಿಚಿತ ದುಷ್ಕರ್ಮಿಗಳು ಬರ್ಬರವಾಗಿ ಕೊಚ್ಚಿ ಕೊಲೆಗೈದ ಘಟನೆ ನಡೆದಿದೆ. 

Advertisement

ಜೆ.ಪಿ.ನಗರದ ನಿವಾಸಿ 28 ರ ಹರೆಯದ ಪ್ರತಾಪ್‌ ಹತ್ಯೆಗೀಡಾದ ಯುವಕ. ಮರಿಯಪ್ಪನ ಪಾಳ್ಯದ 3 ನೇ ಕ್ರಾಸ್‌ನಲ್ಲಿರುವ ಸ್ನೇಹಿತ ಅರುಣ್‌ ಹುಟ್ಟುಹಬ್ಬಕ್ಕಾಗಿ ಮನೆಗೆ ತೆರಳಿ ವಾಪಾಸಾಗುತ್ತಿದ್ದ ವೇಳೆ ದುಷ್ಕರ್ಮಿಗಳಿಂದ ಹತ್ಯೆ ನಡೆದಿದೆ. 

ಜ್ಞಾನ ಭಾರತಿ ಠಾಣೆಯ ಪೊಲೀಸರು ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿ ತನಿಖೆ ಮುಂದುವರಿಸಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next