Advertisement

ಮ್ಯಾನ್ಮಾರ್‌ ಗಡಿಯಲ್ಲಿ ನೆಲಬಾಂಬ್‌: ಬಾಂಗ್ಲಾ ಪ್ರತಿಭಟನೆ

07:03 PM Sep 06, 2017 | udayavani editorial |

ಢಾಕಾ : ಆಗ್ನೇಯ ಏಶ್ಯ ದೇಶವಾಗಿರುವ ಮ್ಯಾನ್ಮಾರ್‌ನ ಗಡಿಯ ಉದ್ದಕ್ಕೂ ನೆಲ ಬಾಂಬ್‌ಗಳನ್ನು ಅವಿತಿರಿಸಿರುವುದಕ್ಕೆ ಪ್ರತಿಭಟಿಸಲು ಬಾಂಗ್ಲಾದೇಶ ಇಂದು ಮ್ಯಾನ್ಮಾರ್‌ ರಾಯಭಾರಿಯನ್ನು ಕರೆಸಿಕೊಂಡಿತು. 

Advertisement

ಮ್ಯಾನ್ಮಾರ್‌ ಹಿಂಸೆಯಿಂದ ಪಾರಾಗಲು ಗಡಿ ದಾಟಿ ಬಾಂಗ್ಲಾ ದೇಶಕ್ಕೆ ನುಸುಳಿ ಬರುತ್ತಿರುವ ಅಸಂಖ್ಯ ರೊಹಿಂಗ್ಯಾಗಳು ಈ ನೆಲ ಬಾಂಬ್‌ಗಳ ಸ್ಫೋಟಕ್ಕೆ ವಿಕಲಾಂಗರಾಗುತ್ತಿರುವುದು ಈಚಿನ ದಿನಗಳಲ್ಲಿ ಸಾಮಾನ್ಯವಾಗಿದೆ. 

ಕಳೆದ ಕೇವಲ 12 ದಿನಗಳ ಅವಧಿಯಲ್ಲಿ ಒಂದೂವರೆ ಲಕ್ಷ ರೊಹಿಂಗ್ಯಾಗಲು ಬಾಂಗ್ಲಾದೇಶಕ್ಕೆ ನುಗ್ಗಿ ಬಂದಿದ್ದಾರೆ. ಮ್ಯಾನ್‌ಮಾರ್‌ನ ರಖೈನ್‌ ರಾಜ್ಯದಲ್ಲಿ ರೊಹಿಂಗ್ಯಾ ಹಿಂಸೆ ಭುಗಿಲೆದ್ದಿದೆ. ಮಾನ್‌ಮ್ಯಾರ್‌ ರಾಯಭಾರಿಯನ್ನು ಢಾಕಾ ಪ್ರತಿಭಟನಾರ್ಥವಾಗಿ ಕರೆಸಿಕೊಳ್ಳುತ್ತಿರುವುದು  ಇದು ಎರಡನೇ ಬಾರಿಯಾಗಿದೆ. 

Advertisement

Udayavani is now on Telegram. Click here to join our channel and stay updated with the latest news.

Next