Advertisement

ಬಾಂಗ್ಲಾ ಕ್ರಿಕೆಟ್‌ ಮಂಡಳಿ- ನಾಯಕನ ನಡುವೆ ಗುದ್ದಾಟ

06:00 AM Sep 23, 2018 | Team Udayavani |

ದುಬೈ: ಏಷ್ಯಾ ಕಪ್‌ ಕೂಟದಲ್ಲಿ ಸತತ ಎರಡು ಸೋಲು ಅನುಭವಿಸಿರುವ ಬೆನ್ನಲ್ಲೇ ಬಾಂಗ್ಲಾದೇಶ ಆಯ್ಕೆ ಮಂಡಳಿ ಹಾಗೂ ನಾಯಕ ಮಶ್ರಫೆ ಮೊರ್ತಜ ನಡುವೆ ಬಹಿರಂಗದ ಗುದ್ದಾಟ ಆರಂಭವಾಗಿದೆ. 

Advertisement

ಭಾರತದ ವಿರುದ್ಧ ಸೋಲು ಅನುಭವಿಸಿದ ನಂತರ ನಡೆದ ಪತ್ರಿಕಾಗೋಷ್ಠಿಯಲ್ಲಿ ಬಾಂಗ್ಲಾ ನಾಯಕ ಮಶ್ರಫೆ ಮೊರ್ತಜ ಮಾತನಾಡಿ, ತಂಡಕ್ಕೆ ಹಠಾತ್‌ ಆಗಿ ಸೌಮ್ಯ ಸರ್ಕಾರ್‌ ಹಾಗೂ ಇಮ್ರುಲ್‌ ಕಯೆಸ್‌ ಸೇರ್ಪಡೆಗೊಂಡಿದ್ದಾರೆ. ತಂಡದಲ್ಲಿ ಮತ್ತೆ ಏನೇನೂ ಬದಲಾವಣೆ ನಡೆಯುತ್ತೂ ನನಗೆ ಗೊತ್ತಿಲ್ಲ. ತಂಡದ ಆಡಳಿತ ಮಂಡಳಿ ನನ್ನ ಗಮನಕ್ಕೆ ತರದೆ ಇಂತಹ ಬದಲಾವಣೆ ಮಾಡಿದೆ. ಫಾರ್ಮ್ನಲ್ಲಿಲ್ಲ ಎನ್ನುವ ಕಾರಣಕ್ಕೆ ಅವರಿಬ್ಬರು ಹೊರಹೋಗಿದ್ದರು. ಇದೀಗ ದಿಢೀರ್‌ ತಂಡದೊಳಕ್ಕೆ ಬಂದಿದ್ದಾರೆ. ಯಾವ ರೀತಿಯಲ್ಲಿ ಆಯ್ಕೆ ನಡೆದಿದೆ ಎನ್ನುವುದೋ ನನಗೆ ಗೊತ್ತಿಲ್ಲ ಎಂದು ಮೊರ್ತಜ ತಿಳಿಸಿದ್ದಾರೆ.
 

Advertisement

Udayavani is now on Telegram. Click here to join our channel and stay updated with the latest news.

Next