Advertisement

ಬಾಂಗ್ಲಾದೇಶದಲ್ಲಿ ಭುಗಿಲೆದ್ದ ಹಿಂಸಾಚಾರ : ಹಿಂದೂಗಳ 20 ಮನೆಗಳಿಗೆ ಬೆಂಕಿ

06:36 PM Oct 18, 2021 | Team Udayavani |

ಢಾಕಾ: ಕಳೆದ ಬುಧವಾರದಿಂದ ಬಾಂಗ್ಲಾದೇಶದಲ್ಲಿ ಆರಂಭ ವಾಗಿರುವ ಹಿಂದೂಗಳ ಮೇಲಿನ ದಾಳಿ ಪ್ರಕರಣ ತೀವ್ರ ಸ್ವರೂಪದ ಕೋಮು ದಳ್ಳುರಿಯಾಗಿ ಪರಿವರ್ತನೆಗೊಂಡಿದ್ದು, ಸೋಮವಾರ ಹಿಂದೂಗಳ 20 ಕ್ಕೂ ಹೆಚ್ಚು ಮನೆಗಳನ್ನು ಬೆಂಕಿ ಹಚ್ಚಿ ಸುಡಲಾಗಿದೆ.

Advertisement

ದುರ್ಗಾಪೂಜೆಯ ಬಳಿಕ ದೇವಾಲಯ ಧ್ವಂಸಗೈದ ಬಳಿಕ ಹಿಂಸಾಚಾರ ಭುಗಿಲೆದ್ದಿದ್ದು, ಢಾಕಾದಿಂದ 255 ಕಿ.ಮೀ ದೂದಲ್ಲಿರುವ ಊರಿನಲ್ಲಿ ಹಿಂದೂಗಳ ಮನೆಗೆ ಬೆಂಕಿ ಹಚ್ಚಲಾಗಿದೆ.

ಹಿಂದೂಗಳ ಮೇಲೆ ವ್ಯಾಪಕ ದಾಳಿಯ ಬಳಿಕ ಹಿಂದೂ ಯುವಕನೊಬ್ಬ ಸಾಮಾಜಿಕ ತಾಣದಲ್ಲಿ ಮುಸ್ಲಿಮರ ವಿಚಾರಗಳಿಗೆ ಧಕ್ಕೆ ತರುವಂತೆ ಬರೆದಿದ್ದಾನೆ ಎಂಬ ಸುದ್ದಿಯಲ್ಲಿ ದಾಳಿ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಬಾಂಗ್ಲಾದೇಶದ ಹಿಂದೂ, ಬೌದ್ಧ ಮತ್ತು ಕ್ರಿಶ್ಚಿಯನ್ ಯೂನಿಟಿ ಕೌನ್ಸಿಲ್ ಚಾಂದ್‌ಪುರ್ ಮತ್ತು ನೋಖಾಲಿಯಲ್ಲಿ ನಡೆದ ದಾಳಿಯಲ್ಲಿ ಕನಿಷ್ಠ ನಾಲ್ಕು ಹಿಂದೂ ಭಕ್ತರು ಸಾವನ್ನಪ್ಪಿದ್ದಾರೆ ಎಂದು ಆರೋಪಿಸಿದೆ.

ಶನಿವಾರ ವಷ್ಟೇ ಕಾಳಿ ದೇವಾಲಯ ಹಾಗೂ ಇಸ್ಕಾನ್‌ ದೇಗುಲದ ಮೇಲೆ ದಾಳಿ ನಡೆಸಿದ್ದ ದುಷ್ಕರ್ಮಿಗಳ ಗುಂಪು, ಮೂವರನ್ನು ಹತ್ಯೆಗೈದಿತ್ತು.

Advertisement

ಹಿಂದೂಗಳ ಮೇಲಿನ ದಾಳಿಗೆ ವ್ಯಾಪಕ ಖಂಡನೆ ವ್ಯಕ್ತ ವಾಗಿದ್ದು , ಬಾಂಗ್ಲಾ ಪ್ರಧಾನಿ ಶೇಖ್ ಹಸೀನಾ ಹಿಂದೂಗಳ ರಕ್ಷಣೆಗೆ ಬದ್ಧರಾಗಿದ್ದು, ತಪ್ಪಿತಸ್ಥರಿಗೆ ಶಿಕ್ಷೆ ನೀಡುವುದಾಗಿ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next