Advertisement

ಬೆಂಗಳೂರು-ನವದೆಹಲಿ ಹವಾಲಾ ಹೆದ್ದಾರಿಯಲ್ಲಿ ಹಣ ಸಾಗಣೆ: ಬಿಜೆಪಿ

06:35 AM Sep 21, 2018 | Team Udayavani |

ನವದೆಹಲಿ: ಕರ್ನಾಟಕದ ಸಚಿವ ಡಿ.ಕೆ.ಶಿವಕುಮಾರ್‌ ವಿರುದ್ಧ ಬಿಜೆಪಿಯ ವಾಗ್ಧಾಳಿ ಗುರುವಾರವೂ ಮುಂದುವರಿದಿದೆ. ನವದೆಹಲಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕೇಂದ್ರ ಸಚಿವ ಗಜೇಂದ್ರ ಸಿಂಗ್‌ ಶೆಖಾವತ್‌ “ಕಾಂಗ್ರೆಸ್‌ ಕೇಂದ್ರ ಕಚೇರಿಗೆ ಹಣವನ್ನು ಬೆಂಗಳೂರು- ನವದೆಹಲಿ ಹವಾಲಾ ಹೆದ್ದಾರಿಯಲ್ಲಿ ತರಲಾಗಿತ್ತು’ ಎಂದು ಟೀಕಿಸಿದ್ದಾರೆ.

Advertisement

ಕಾಂಗ್ರೆಸ್‌ಗೆ ಹವಾಲಾ ಜಾಲದಿಂದ ಹಣ ಪಾವತಿಯಾಗುತ್ತಿರುವ ವಿಚಾರ ಜನರಿಗೆ ಗೊತ್ತಾಗಿದೆ. ಅದರಿಂದ ಜನರ ಮನಸ್ಸು ಬೇರೆಡೆಗೆ ಸೆಳೆಯಲು ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಕೇಂದ್ರ ಸರ್ಕಾರದ ವಿರುದಟಛಿ ರಫೇಲ್‌ ಡೀಲ್‌, ಪಾಕಿಸ್ತಾನ ಸೇನೆಯಿಂದ ಹತ್ಯೆಗೀಡಾದ ಬಿಎಸ್‌ಎಫ್ ಯೋಧನ ವಿಚಾರವನ್ನು ಪ್ರಸ್ತಾಪ ಮಾಡುತ್ತಿದ್ದಾರೆ ಎಂದು ಸಚಿವ ಶೆಖಾವತ್‌ ಟೀಕಿಸಿದ್ದಾರೆ. ಕಾಂಗ್ರೆಸ್‌ ಅಧ್ಯಕ್ಷ ಮತ್ತು ಅವರ ಪಕ್ಷದ ವಕ್ತಾರರು ಯಾವ ಮೂಲದಿಂದ ಮತ್ತು ಯಾರು ಅವರಿಗೆ ಹಣ ಪಾವತಿ ಮಾಡಿದ್ದಾರೆ ಎಂಬ ಬಗ್ಗೆ ಸಾರ್ವಜನಿಕರಿಗೆ ವಿವರಿಸಲಿ ಎಂದೂ ಆಗ್ರಹಿಸಿದ್ದಾರೆ ಬಿಜೆಪಿ ನಾಯಕ.

Advertisement

Udayavani is now on Telegram. Click here to join our channel and stay updated with the latest news.

Next