Advertisement

ಮೈ ಮೇಲೆ ಪ್ರೇಯಸಿ ಹಚ್ಚೆ ಹಾಕಿಸಿಕೊಂಡಿದ್ದ ಆರೋಪಿ 

01:58 PM Apr 17, 2023 | Team Udayavani |

ಬೆಂಗಳೂರು: ರಾಜಗೋಪಾಲ ನಗರದಲ್ಲಿ ಪ್ರೇಯಸಿಯ ಹುಟ್ಟುಹಬ್ಬದಂದೇ ಆಕೆಯ ಕತ್ತು ಕೊಯ್ದು ಹತ್ಯೆ ಮಾಡಿದ ಪ್ರಕರಣದಲ್ಲಿ ಮತ್ತಷ್ಟು ಅಚ್ಚರಿ ವಿಚಾರಗಳು ತನಿಖೆಯಲ್ಲಿ ಬೆಳಕಿಗೆ ಬಂದಿದ್ದು, ಈ ಹಿಂದೇಯೇ ಇವರ ಪ್ರೀತಿಯ ವಿಚಾರ ಠಾಣೆ ಮೆಟ್ಟಿಲೇರಿತ್ತು ಎಂಬುದು ಗೊತ್ತಾಗಿದೆ.

Advertisement

ಪ್ರಿಯಕರ ಪ್ರಶಾಂತ್‌ ಮಗಳಿಗೆ ಕಿರುಕುಳ ಕೊಡುತ್ತಿದ್ದಾನೆ ಎಂದು ಕೋರಮಂಗಲ ಠಾಣೆಯಲ್ಲಿ ಮೂರು ತಿಂಗಳ ಹಿಂದೆಯೇ ನವ್ಯಾಳ ತಾಯಿ ದೂರು ದಾಖಲಿಸಿದ್ದರು. ನಂತರ ಪೊಲೀಸರು ಪ್ರಶಾಂತ್‌ನನ್ನು ಕರೆದು ಬುದ್ಧಿವಾದ ಹೇಳಿ ಎಚ್ಚರಿಕೆ ಕೊಟ್ಟು ಕಳುಹಿಸಿದ್ದರು. ನವ್ಯಾ ಸಹವಾಸಕ್ಕೆ ಮುಂದೆ ಹೋಗುವುದಿಲ್ಲ ಎಂದು ಆರೋಪಿ ಹೇಳಿದ್ದ. ಆದರೆ, ಮತ್ತೆ ಪರಸ್ಪರ ಇಬ್ಬರು ಸಂಪರ್ಕದಲ್ಲಿದ್ದರು. ಪ್ರಿಯಕರ ಪ್ರಶಾಂತ್‌ ನವ್ಯಾಳನ್ನು ಅತಿಯಾಗಿ ಪ್ರೀತಿಸುತ್ತಿದ್ದ. ಮೈಮೇಲೆ ನವ್ಯ ಫೋಟೊ ಹಚ್ಚೆ ಹಾಕಿಸಿಕೊಂಡಿದ್ದ. ಆಕೆಯ ಹೆಸರನ್ನು ದೇಹದ ಮೇಲೆ ಬರೆಸಿಕೊಂಡಿದ್ದ ಸಂಗತಿ ಪೊಲೀಸರ ತನಿಖೆಯಲ್ಲಿ ಬಹಿರಂಗವಾಗಿದೆ.

ಮೃತದೇಹ ತುಂಡು ಮಾಡಿ ಎಸೆಯಲು ಸಂಚು: ನವ್ಯಾ ಹತ್ಯೆ ಮಾಡಿ 5 ಗಂಟೆ ಮೃತದೇಹದ ಜತೆಗಿದ್ದ. ಈ ವೇಳೆ ನವ್ಯ ಮೃತದೇಹ ತುಂಡು ತುಂಡಾಗಿ ಮಾಡಿ ಎಸೆಯಲು ಸಂಚು ರೂಪಿಸಿದ್ದ. ಬಳಿಕ ತಾನೂ ಆತ್ಮಹತ್ಯೆ ಮಾಡಿಕೊಳ್ಳಬೇಕು ಎಂದು ಭಾವಿಸಿದ್ದ. ಆದರೆ, ನಂತರ ಅದ್ಯಾವುದನ್ನೂ ಮಾಡದೇ ಪೊಲೀಸರ ಮುಂದೆ ಶರಣಾಗಿದ್ದ.

ಏನಿದು ಪ್ರಕರಣ ?: ನವ್ಯ ಪೊಲೀಸ್‌ ಇಲಾಖೆಗೆ ಆಂತರಿಕ ಭದ್ರತಾ ವಿಭಾಗದಲ್ಲಿ ಕ್ಲರ್ಕ್‌ ಆಗಿದ್ದಳು. 6 ವರ್ಷಗಳಿಂದ ಪ್ರಶಾಂತ್‌ನನ್ನು ಪ್ರೀತಿಸುತ್ತಿದ್ದಳು. ನವ್ಯ, ಪ್ರಶಾಂತ್‌ ದೂರದ ಸಂಬಂಧಿಕರಾಗಿದ್ದರು. ಮಂಗಳವಾರ ನವ್ಯ ಹುಟ್ಟುಹಬ್ಬವಿತ್ತು. ಆ ದಿನ ಕೆಲಸವಿದೆ ಎಂದಿದ್ದ ಪ್ರಶಾಂತ್‌ ಏ.14ಕ್ಕೆ ಜನ್ಮದಿನ ಆಚರಿಸಲು ಯೋಜನೆ ರೂಪಿಸಿದ್ದ. ಕೇಕ್‌ ಕಟ್ಟು ಮಾಡಿ ಕೇಕ್‌ ತಿನ್ನಿಸಿದ್ದ. ಬಳಿಕ ಹರಿತವಾದ ಚಾಕುವಿನಿಂದ ಕುತ್ತಿಗೆ ಕೊಯ್ದು ಕೊಲೆ ಮಾಡಿದ್ದು, ಬಳಿಕ ಪೊಲೀಸರಿಗೆ ಶರಣಾಗಿದ್ದಾನೆ.

Advertisement

Udayavani is now on Telegram. Click here to join our channel and stay updated with the latest news.

Next