Advertisement

ಶಾಲೆಯ ಜಾಗ ಅತಿಕ್ರಮಣ : 6 ಎಕರೆ 18 ಗುಂಟೆ ಜಾಗದಲ್ಲಿ ಉಳಿದಿರುವುದು ಕೇವಲ ಮೂರು ಎಕರೆ ಮಾತ್ರ

08:05 PM Apr 16, 2022 | Team Udayavani |

ರಬಕವಿ-ಬನಹಟ್ಟಿ: ತಾಲ್ಲೂಕಿನ ಹನಗಂಡಿ ಗ್ರಾಮದ ಸರ್ಕಾರಿ ತೋಟದ ಶಾಲೆ ನಂ 1ಕ್ಕೆ ಮಂಜೂರಾದ ಸ್ಥಳವನ್ನು ಶಾಲೆಯ ಸುತ್ತ ಮುತ್ತಲಿನ ಜನರು ಅತಿಕ್ರಮಣ ಮಾಡುತ್ತಿದ್ದಾರೆ ಎಂದು ಶಾಲಾ ಅಭಿವೃದ್ಧಿ ಮಂಡಳಿಯ ಅಧ್ಯಕ್ಷ  ಶಿವಾನಂದ ಕುಂಟಶೆಟ್ಟಿ ಆರೋಪಿಸಿದ್ದಾರೆ.

Advertisement

ಅವರು ಶನಿವಾರ ಹನಗಂಡಿ ಗ್ರಾಮದ ಶಾಲಾ ಆವರಣದಲ್ಲಿ ಪತ್ರಿಕೆಯ ಜೊತೆಗೆ ಮಾತನಾಡಿ, ಅತಿಕ್ರಮಣದ ಕುರಿತು ಶಾಸಕರಿಗೆ, ಜಿಲ್ಲಾಧಿಕಾರಿಗಳಿಗೆ, ಜಮಖಂಡಿ ಉಪವಿಭಾಗಾಧಿಕಾರಿಗಳಿಗೆ, ತಾಲ್ಲೂಕಿನ ತಹಶೀಲ್ದಾರ್, ಜಮಖಂಡಿ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಹಾಗೂ ಸರ್ವೆ ಅಧಿಕಾರಿಗಳಿಗೆ 2019 ರಿಂದ ದಿ. 8.04. 2022 ರವರೆಗೆ ಹಲವಾರು ಬಾರಿ ಮನವಿ ಮಾಡಿಕೊಂಡರೂ ಯಾವುದೆ ಪ್ರಯೋಜನವಾಗಿಲ್ಲ. ಈ ಕುರಿತು ಸರ್ವೆ ಅಧಿಕಾರಿಯನ್ನು ಶಾಲೆಯ ಜಾಗದ ಸರ್ವೆ ಮಾಡಿ ಎಂದು ಕೇಳಿದರೆ ಅವರು ನಾನು ಮಾಡುವುದಿಲ್ಲ ಎನ್ನುತ್ತಾರೆ ಎಂದು ಶಿವಾನಂದ ಕುಂಟಶೆಟ್ಟಿ ತಿಳಿಸಿದರು.

ಈ ಶಾಲೆಗೆ ಒಟ್ಟು 6 ಎಕರೆ 18 ಗುಂಟೆಯಷ್ಟು ಜಾಗ ಕಟ್ಟಡ ಮತ್ತು ಆಟದ ಮೈದಾನಕ್ಕೆ ನೀಡಲಾಗಿದೆ. ಆದರೆ ಸುತ್ತ ಮುತ್ತಲಿನ ಒತ್ತುವರೆಯಿಂದಾಗಿ ಈಗ ಕೇವಲ 3 ಎಕರೆಯಷ್ಟು ಜಾಗ ಮಾತ್ರ ಉಳಿದುಕೊಂಡಿದೆ. ಈ ಶಾಲೆಯಲ್ಲಿ ಹನಗಂಡಿ ಹಾಗೂ ಸುತ್ತ ಮುತ್ತಲಿನ ತೋಟದ ಪ್ರದೇಶದ 1 ನೇ ತರಗತಿಯಿಂದ 8 ನೇ ವರ್ಗದವರೆಗೆ 304 ವಿದ್ಯಾರ್ಥಿಗಳು ಓದುತ್ತಿದ್ದಾರೆ. ಈ ಶಾಲೆಯ ವಿದ್ಯಾರ್ಥಿಗಳು ಜಿಲ್ಲೆಯಲ್ಲಿ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಎನ್‌ಎನ್‌ಎಂಎಸ್ ಪರೀಕ್ಷೆ ಪಾಸು ಮಾಡಿದ್ದಾರೆ.

ಇದನ್ನೂ ಓದಿ : ಡಿವೈಎಸ್ಪಿ ಗಣಪತಿ ಪ್ರಕರಣದಲ್ಲಿ ಜಾರ್ಜ್ ಗೆ ಸಿಬಿಐ ಕ್ಲೀನ್ ಚಿಟ್ ಸಿಕ್ಕಿದೆ: ಸಿದ್ದರಾಮಯ್ಯ

ಸಂಬಂಧ ಪಟ್ಟ ಇಲಾಖೆಯ ಅಧಿಕಾರಿಗಳು ಅದಷ್ಟು ಬೇಗನೆ ಸರ್ವೆ ಕಾರ್ಯ ನಡೆಸಿ ಅತಿಕ್ರಮಣವಾದ ಜಾಗವನ್ನು ಶಾಲೆಗೆ ಮರಳಿಸದೆ ಇದ್ದರೆ ಮುಂದಿನ ದಿನಗಳಲ್ಲಿ ವಿದ್ಯಾರ್ಥಿಗಳ ಜೊತೆಗೂಡಿ ತಹಶೀಲ್ದಾರ್ ಕಾರ್ಯಾಲಯಕ್ಕೆ ಮುತ್ತಿಗೆ ಹಾಕಲಾಗುವುದು ಎಂದು ಎಸ್ಡಿಎಂಸಿ ಸದಸ್ಯ ಸುಭಾಸ ಮುರಗುಂಡಿ ತಿಳಿಸಿದರು.

Advertisement

ಶಾಲೆಯ ಜಾಗ ಅತಿಕ್ರಮಣವಾಗಿದೆ. ಆದಷ್ಟು ಬೇಗನೆ ಸರ್ವೆ ಕಾರ್ಯವನ್ನು ಕೈಗೊಳ್ಳಲಾಗುವುದು. ಈ ಕುರಿತು ಅಧಿಕಾರಿಗಳಿಗೆ ತಿಳಿಸುತ್ತೇನೆ.
– ಸಿದ್ದು ಸವದಿ, ಶಾಸಕರು ತೇರದಾಳ

ಅತಿಕ್ರಮಣ ಕುರಿತು ತಹಶೀಲ್ದಾರ್ ಕಾರ್ಯಾಲಯಕ್ಕೆ ಎಸ್ಡಿಎಂಸಿ ಸದಸ್ಯರು ಮತ್ತು ಗ್ರಾಮಸ್ಥರು ಸರ್ವೆ ಕಾರ್ಯಕ್ಕೆ ಆಗ್ರಹಿಸಿ ಮನವಿ ನೀಡಿದ್ದಾರೆ. ಈ ಕುರಿತು ತಹಶೀಲ್ದಾರ್ ಅವರ ಗಮನಕ್ಕೂ ತರಲಾಗಿದೆ. ಆದಷ್ಟು ಬೇಗನೆ ಸರ್ವೆ ಕಾರ್ಯ ನಡೆಸಬೇಕು ಮತ್ತು ಶಾಲೆ ಪ್ರದೇಶಕ್ಕೆ ಬೌಂಡರಿಗಳನ್ನು ಹಾಕಿಕೊಡಬೇಕು ಎಂದು ತಹಶೀಲ್ದಾರ್ ಅವರಿಗೆ ಒತ್ತಾಯಿಸುತ್ತೇನೆ.
– ಸಿ.ಎಂ.ನ್ಯಾಮಗೌಡ, ಕ್ಷೇತ್ರ ಶಿಕ್ಷಣಾಧಿಕಾರಿ ಜಮಖಂಡಿ

Advertisement

Udayavani is now on Telegram. Click here to join our channel and stay updated with the latest news.

Next