Advertisement

ಮತದಾನ ವಿವರ ವಿಳಂಬ: ಅರ್ಜಿಯ ತ್ವರಿತ ವಿಚಾರಣೆಗೆ ಸುಪ್ರೀಂ ಅಸ್ತು

01:49 AM May 18, 2024 | Team Udayavani |

ಹೊಸದಿಲ್ಲಿ: ಚುನಾವಣೆ ನಡೆದ 48 ಗಂಟೆಯಲ್ಲಿ ಮತ ದಾನ ಪ್ರಮಾಣದ ಪೂರ್ಣ ಮಾಹಿತಿ ಬಿಡು ಗಡೆಗೆ ಚುನಾವಣ ಆಯೋಗಕ್ಕೆ ನಿರ್ದೇಶನ ಕೋರಿ ಸಲ್ಲಿಕೆಯಾಗಿದ್ದ ಅರ್ಜಿಯ ವಿಚಾರಣೆಗೆ ಸುಪ್ರೀಂ ಕೋರ್ಟ್‌ ಒಪ್ಪಿಕೊಂಡಿದೆ. ಸಿಜೆಐ ಡಿ.ವೈ.ಚಂದ್ರಚೂಡ್‌ ನೇತೃತ್ವದ ಪೀಠವು ಲಿಸ್ಟ್‌ನಲ್ಲಿರುವ ಎಲ್ಲ ದಾವೆಗಳ ಬಳಿಕ ವಿಚಾರಣೆ ನಡೆಸ ಲಾಗುವುದು ಎಂದು ತಿಳಿಸಿತು. ಅಸೋಸಿಯೇಶನ್‌ ಫಾರ್‌ ಡೆಮಾ ಕ್ರಟಿಕ್‌ ರಿಫಾರ್ಮ್Õ(ಎಡಿಆರ್‌) ಪರವಾಗಿ ಹಾಜ ರಾದ ವಕೀಲ ಪ್ರಶಾಂತ್‌ ಭೂಷಣ್‌ ಅವರು, ತ್ವರಿತ ಅರ್ಜಿ ವಿಚಾರಣೆ ಮನವಿ ಮಾಡಿದರು. ಪ್ರಸಕ್ತ ನಡೆ ಯುತ್ತಿರುವ ಲೋಕಸಭೆ ಚುನಾವಣೆಯ ಮೊದಲ 2 ಹಂತದ ಮತದಾನ ಮುಗಿದ 11 ದಿನಗಳ ಬಳಿಕ ಆಯೋಗವು ವಿವರವನ್ನು ಪ್ರಕಟಿಸಿತ್ತು. ಈ ವಿಳಂಬ ಪ್ರಶ್ನಿಸಿ ಎಡಿಆರ್‌ ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next