Advertisement

Ballary; ವಿದ್ಯುತ್ ಕಂಬದ ಮೇಲೆ ಮೃತಪಟ್ಟ ಎಲೆಕ್ಟ್ರೀಷಿಯನ್: ಆಘಾತಕ್ಕೆ ಬೇರ್ಪಟ್ಟ ರುಂಡ-ಮುಂಡ

11:22 AM Aug 31, 2023 | Team Udayavani |

ಬಳ್ಳಾರಿ: ವಿದ್ಯುತ್ ಕೆಲಸ ಮಾಡುವ ಸಲುವಾಗಿ ವಿದ್ಯುತ್ ಕಂಬ ಏರಿದ್ದ ಖಾಸಗಿ ಎಲೆಕ್ಟ್ರೀಷಿಯನ್ ಗೆ ವಿದ್ಯುತ್ ತಂತಿ ತಗುಲಿ ರುಂಡ-ಮುಂಡ ಬೇರ್ಪಟ್ಟು ಮೃತಪಟ್ಟಿರುವ ಘಟನೆ ತಾಲೂಕು ದಮ್ಮೂರು ಗ್ರಾಮದಲ್ಲಿ ಗುರುವಾರ ನಡೆದಿದೆ.

Advertisement

ಮೃತ ಯುವಕನ್ನು ಭದ್ರ ಎಂದು ಗುರುತಿಸಲಾಗಿದೆ. ಕುರುಗೋಡು ತಾಲೂಕಿನ ದಮ್ಮೂರು ಗ್ರಾಮದ ಹೊಲದಲ್ಲಿ ಘಟನೆ ನಡೆದಿದೆ. ವಿದ್ಯುತ್ ತಂತಿ ಜೋಡಿಸುವ ಕೆಲಸದ ನಿಮಿತ್ತ ಕಂಬ ಏರಿದ್ದ ಹಿನ್ನೆಲೆಯಲ್ಲಿ ಈ ಘಟನೆ ಸಂಭವಿಸಿದೆ.

ಇದನ್ನೂ ಓದಿ:New Delhi; ದಾರಿ ವಿಚಾರಕ್ಕೆ ಜಗಳ; ಅಮೇಜಾನ್ ಮ್ಯಾನೇಜರ್ ಗೆ ಗುಂಡಿಕ್ಕಿದ್ದ ಇಬ್ಬರ ಬಂಧನ

ಖಾಸಗಿಯಾಗಿ ಲೈನ್ ಮ್ಯಾನ್ ಕೆಲಸ ಮಾಡುತ್ತಿದ್ದ ಭದ್ರ, ಬೆಳಿಗ್ಗೆ ಕರೆಂಟ್ ಇಲ್ಲವೆಂದು ‌ಭಾವಿಸಿ ಕಂಬ ಹತ್ತಿದ್ದನು. ಎಂದಿನಂತೆ ಬೆಳಿಗ್ಗೆ ‌ಆರು‌ ಗಂಟೆಗೆ (ಲೈನ್ ಟ್ರಾಫ್ ) ನಿಗದಿತ ಸಮಯ ದಲ್ಲಿ ಬದಲಾವಣೆ ಮಾಡಲಾಗಿದೆ.

ಸ್ಥಳಕ್ಕೆ ಕುರುಗೋಡು ಪೊಲೀಸರು ಭೇಟಿ ನೀಡಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next