Advertisement

ಶವ ಸಂಸ್ಕಾರಕ್ಕೆ ಮುಕ್ತಿ ವಾಹನ-ಜೆಸಿಬಿ

09:54 PM May 31, 2021 | Team Udayavani |

ಹರಪನಹಳ್ಳಿ: ಕೊರಾನಾ ಹಿನ್ನೆಲೆ ಶವ ಸಂಸ್ಕಾರಕ್ಕಾಗಿ ಪುರಸಭೆ ವತಿಯಿಂದ ಮುಕ್ತಿ ವಾಹನ ಮತ್ತು ಜೆಸಿಬಿಯನ್ನು ಸಾರ್ವಜನಿಕರ ಅನುಕೂಲಕ್ಕಾಗಿ ಯೋಗ್ಯ ದರ ನಿಗ ದಿಪಡಿಸಿ ನೀಡಲಾಗುತ್ತಿದೆ ಎಂದು ಪುರಸಭೆ ಅಧ್ಯಕ್ಷ ಮಂಜುನಾಥ ಇಜಾಂತಕರ್‌ ತಿಳಿಸಿದರು.

Advertisement

ಪಟ್ಟಣದ ಪುರಸಭೆ ಅಧ್ಯಕ್ಷರ ಸಭಾಂಗಣದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಸಾರ್ವಜನಿಕರ ಹಿತದೃಷ್ಟಿಯಿಂದ ಬಡವರಿಗೆ, ದಿನ ದಲಿತರಿಗೆ ಅನುಕೂಲವಾಗಲೆಂದು ಪುರಸಭೆಯಿಂದ ಮುಕ್ತಿವಾಹನ ಜೊತೆಗೆ ಜೆಸಿಬಿಯನ್ನು ಸಹ ಯೋಗ್ಯದರದಲ್ಲಿ ಬಾಡಿಗೆಯೊಂದಿಗೆ ಅಂತಿಮ ಸಂಸ್ಕಾರಕ್ಕಾಗಿ ನೀಡಲಾಗುತ್ತದೆ ಎಂದು ಹೇಳಿದರು.

ಪುರಸಭೆ ಮುಖ್ಯಾ ಧಿಕಾರಿ ಬಿ.ಆರ್‌.ನಾಗರಾಜ್‌ ನಾಯ್ಕ ಮಾತನಾಡಿ, ಕೊರೊನಾ ಹಿನ್ನೆಲೆಯಲ್ಲಿ ಖಾಸಗಿ ಜೆಸಿಬಿಯವರು ಶವ ಸಂಸ್ಕಾರಕ್ಕಾಗಿ ಗುಂಡಿ ತೆಗೆಯಲು ನಿರಾಕರಿಸುವುದರೊಂದಿಗೆ ಸಾರ್ವಜನಿಕರಿಂದ ಹೆಚ್ಚಿನ ಬೇಡಿಕೆಯನ್ನು ಇಡುವುತ್ತಿರುವುದರಿಂದ, ಪಟ್ಟಣದ ಸಾರ್ವಜನಿಕರ ಮತ್ತು ಎಲ್ಲ ಸರ್ವ ಸದಸ್ಯರ ಒತ್ತಾಸೆಯ ಮೇರೆಗೆ ಮುಕ್ತಿ ವಾಹನ ಮತ್ತು ಜೆಸಿಬಿಯನ್ನು ಸಾರ್ವಜನಿಕರು ಸದುಪಯೋಗಪಡಿಸಿಕೊಳ್ಳಬೇಕು ಎಂದರು.

ಹೆಚ್ಚಿನ ಮಾಹಿತಿಗಾಗಿ ಮಂಜುನಾಥ .ಬಿ ಹಿರಿಯ ಆರೋಗ್ಯ ನಿರೀಕ್ಷಕರು ಮೊ-9844936776ಗೆ ಸಂಪರ್ಕಿಸಬಹುದು. ಈ ವೇಳೆ ಪುರಸಭೆ ಸದಸ್ಯರಾದ ಕಿರಣ್‌ ಶ್ಯಾನ್‌ ಭೋಗ್‌, ಸಮುದಾಯ ಸಂಘಟನಾಧಿ ಕಾರಿ ಸಿ.ಲೋಕಾನಾಯ್ಕ ಹಾಗೂ ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next