Advertisement

ನಿದ್ದೆ-ಪಾದಯಾತ್ರೆ ಮಾಡಿದರೆ  ಅಧಿಕಾರಕ್ಕೆ ಬರಲ್ಲ: ಶ್ರೀರಾಮುಲು

06:46 PM Feb 20, 2022 | Team Udayavani |

ಬಳ್ಳಾರಿ: ಕಾಂಗ್ರೆಸ್‌ ಮುಖಂಡರು ವಿಧಾನಸಭೆಯಲ್ಲಿ ನಿದ್ದೆ ಮಾಡಿದರೆ, ಆಡಳಿತನಡೆಸುವವರ ವಿರುದ್ಧ ಪಾದಯಾತ್ರೆ ಮಾಡಿದರೆ ಅಧಿ ಕಾರಕ್ಕೆ ಬರಲಾಗದು ಎಂದುಕಾಂಗ್ರೆಸ್‌ ವಿರುದ್ಧ ಉಸ್ತುವಾರಿ ಸಚಿವ ಬಿ. ಶ್ರೀರಾಮುಲುಚಾಟಿ ಬೀಸಿದರು.

Advertisement

ನಗರದ ಹರಿಶ್ಚಂದ್ರ ಘಾಟ್‌ ಪರಿಶೀಲನೆವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,ವಿಧಾನಸೌಧದಲ್ಲಿ ಅಹೋರಾತ್ರಿ ಧರಣಿ ನಡೆಸುತ್ತಿರುವಕಾಂಗ್ರೆಸ್‌ ಮುಖಂಡರು, ವಿಧಾನಸಭೆಯಲ್ಲಿ ಮಲಗಿಕೊಂಡರೆಅ ಧಿಕಾರಕ್ಕೆ ಬರುತ್ತೇವೆ ಎನ್ನುವ ಭ್ರಮೆಯಲ್ಲಿದ್ದಾರೆ. ಅದಕ್ಕಾಗಿಅವರು ಹಳೇ ಚಾಳಿ ಮುಂದುವರಿಸಿಕೊಂಡು ಬರುತ್ತಿದ್ದಾರೆ.

ಈಗ ಕಾಲ ಬದಲಾಗಿದೆ.ನಿದ್ದೆ ಮಾಡಿದರೆ ಅ ಧಿಕಾರಕ್ಕೆ ಬರುವುದಿಲ್ಲ. ಬದಲಾಗಿ ಸದನದಲ್ಲಿ ಬಡವರ ಬಗ್ಗೆ ಚರ್ಚೆಮಾಡಬೇಕು. ಜ್ವಲಂತ ಸಮಸ್ಯೆಗಳ ಬಗ್ಗೆ ಮಾತನಾಡಲು ನಮಗೆ ವಿಧಾನಸಭೆಗೆಕಳುಹಿಸಿದ್ದಾರೆ ಎಂಬುದನ್ನು ತಿಳಿಯಬೇಕು ಎಂದರು.

Advertisement

Udayavani is now on Telegram. Click here to join our channel and stay updated with the latest news.

Next