Advertisement

ದೇವದಾಸಿಯರಿಗೆ ಸೌಲಭ್ಯ ಒದಗಿಸಲು ಆಗ್ರಹ

03:55 PM Nov 08, 2021 | Team Udayavani |

ಬಳ್ಳಾರಿ: ಬಳ್ಳಾರಿ ಮತ್ತು ವಿಜಯನಗರಜಿಲ್ಲೆಯಲ್ಲಿ 12600ಕ್ಕೂ ಅಧಿ ಕದೇವದಾಸಿಯರಿದ್ದು ಸರ್ಕಾರದಿಂದಇದುವರೆಗೆ ಯಾವುದೇ ಸೌಲಭ್ಯಗಳುಸಿಗುತ್ತಿಲ್ಲ ಎಂದು ಆರೋಪಿಸಿ ರಾಜ್ಯದೇವದಾಸಿಯರ ಕ್ಷೇಮಾಭಿವೃದ್ಧಿಒಕ್ಕೂಟದಿಂದ ಡಿಸಿ ಕಚೇರಿ ಎದುರುಪ್ರತಿಭಟನೆ ನಡೆಸಲಾಯಿತು.

Advertisement

ಒಕ್ಕೂಟದ ಜಿಲ್ಲಾ ಸಂಚಾಲಕಕಟ್ಟೆಬಸಪ್ಪ ನೇತೃತ್ವದಲ್ಲಿ ನಡೆದಪ್ರತಿಭಟನೆಯಲ್ಲಿ ದೇವದಾಸಿಯರಬಾಕಿ ಇರುವ ಪಿಂಚಣಿ ಜಮಾಮಾಡಬೇಕು. ದೇವದಾಸಿಯರಮಕ್ಕಳಿಗೆ ಪುನರ್ವಸತಿ ರೂಪಿಸಬೇಕು,ಭೂಮಿ, ಮನೆ, ನಿವೇಶನ, ಶೇ.75ರ ಸಹಾಯಧನದಲ್ಲಿ ಸಾಲ ಮತ್ತು ಮದುವೆಯ ಸಹಾಯಧನ ಸೌಲಭ್ಯಒದಗಿಸಬೇಕು ಎಂದು ಜಿಲ್ಲಾ ಧಿಕಾರಿಗಳಮೂಲಕ ಮುಖ್ಯಮಂತ್ರಿಗಳಲ್ಲಿ ಒತ್ತಾಯಿಸಿದರು.

ಹೊಸ ಆರ್ಥಿಕ ನೀತಿಯಿಂದ ಎಲ್ಲ ರಂಗಗಳಲ್ಲಿ ಯಂತ್ರಗಳ ಬಳಕೆಆಗುತ್ತಿದೆ. ಹೀಗಾಗಿ ದೇವದಾಸಿಮಕ್ಕಳಿಗೆ ಉದ್ಯೋಗ ಸಿಗುತ್ತಿಲ್ಲ.ದೇವದಾಸಿಯರ ಕನಿಷ್ಠ 5 ಲಕ್ಷ ರೂ.ನೀಡಿ ತಲಾ 5 ಎಕರೆ ಜಮೀನುಒದಗಿಸಲು ಸರ್ಕಾರ ಮುಂದಾಗಬೇಕುಎಂದು ಒತ್ತಾಯಿಸಿದರು.ಸರ್ಕಾರಿ, ಅರೆ ಸರ್ಕಾರಿ ಉದ್ಯೋಗಗಳಲ್ಲಿ ಪ್ರತ್ಯೇಕ ಮೀಸಲಾತಿನೀಡಬೇಕು ಎಂದು ಆಗ್ರಹಿಸಿದರು.ಬಳಿಕ ಜಿಲ್ಲಾಡಳಿತಕ್ಕೆ ಮನವಿಸಲ್ಲಿಸಲಾಯಿತು.

ಪ್ರತಿಭಟನೆಯಲ್ಲಿಒಕ್ಕೂಟದ ಅಡಿವೆಪ್ಪ, ರೇಣುಕಾ,ಹೊನ್ನೂರಮ್ಮ, ಗೌರಮ್ಮ, ಈರಮ್ಮ,ನಾಗಮ್ಮ, ತಾಯಮ್ಮ, ಕೆಂಚಮ್ಮ,ಮರಮ್ಮ, ಗಾದೆಮ್ಮ, ಶಿವರುದ್ರಮ್ಮಇನ್ನಿತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next