Advertisement

ಸಚಿವ ಶ್ರೀರಾಮುಲುರಿಂದ ಭೂಮಿಪೂಜೆ

05:58 PM Mar 02, 2022 | Team Udayavani |

ಬಳ್ಳಾರಿ: ನಗರದ ಟ್ರಾಮಾಕೇರ್‌ ಆಸ್ಪತ್ರೆ ಕಂಪೌಂಡ್‌ನಿರ್ಮಾಣಕ್ಕೆ ಭೂಮಿಪೂಜೆ ಸೇರಿದಂತೆ ವಿವಿಧೆಡೆ ಸಿಸಿ ರಸ್ತೆಕಾಮಗಾರಿಗಳಿಗೆ ಸಾರಿಗೆ, ಪರಿಶಿಷ್ಟ ವರ್ಗಗಳ ಕಲ್ಯಾಣಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಬಿ. ಶ್ರೀರಾಮುಲುಅವರು ಮಂಗಳವಾರ ಭೂಮಿಪೂಜೆ ನೆರವೇರಿಸಿದರು.

Advertisement

ಮಹಾನಗರ ಪಾಲಿಕೆ ವ್ಯಾಪ್ತಿಯ ಬರುವ ವಾರ್ಡ್‌ನಂ.25ರ ಸ್ವತಂತ್ರ ನಗರ, ರಾಮನಗರ ಮತ್ತು ಹನುಮಾನನಗರದಲ್ಲಿ ಎಸ್ಸಿಪಿ ಮತ್ತು ಟಿಎಸ್ಪಿ ಯೋಜನೆ ಅಡಿ ಸಿಸಿರಸ್ತೆ ನಿರ್ಮಾಣಕ್ಕೆ ಭೂಮಿಪೂಜೆ ನೆರವೇರಿಸಿದರು.ಬಸವನಕುಂಟೆಯಲ್ಲಿ ಸ್ಲಂ ಬೋರ್ಡ್‌ ವತಿಯಿಂದನಿರ್ಮಿಸಲಾಗುತ್ತಿರುವ ಮನೆಗಳ ಭೂಮಿಪೂಜೆ ನೆರವೇರಿಸಿದರು.

ಈ ಸಂದರ್ಭದಲ್ಲಿ ಬಳ್ಳಾರಿ ನಗರಶಾಸಕರಾದ ಜಿ. ಸೋಮಶೇಖರರೆಡ್ಡಿ, ಬಳ್ಳಾರಿ ಗ್ರಾಮೀಣಶಾಸಕ ಬಿ. ನಾಗೇಂದ್ರ, ವಿಧಾನಪರಿಷತ್‌ ಸದಸ್ಯ ವೈ.ಎಂ.ಸತೀಶ್‌, ಮಹಾನಗರ ಪಾಲಿಕೆ ಸದಸ್ಯರಾದ ಗೋವಿಂದರಾಜುಲು ಮತ್ತಿತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next