Advertisement

Ballari: ಕಾಂಗ್ರೆಸ್ ಕಾರ್ಪೊರೇಟರ್ ಗೆ ಹಿಗ್ಗಾಮುಗ್ಗಾ ಥಳಿತ

06:00 PM Jul 12, 2024 | Team Udayavani |

ಬಳ್ಳಾರಿ : ನಗರದ ರಾಯಲ್ ಸರ್ಕಲ್‌ ನಲ್ಲಿರುವ ಮಹಾನಗರ ಪಾಲಿಕೆ ಮುಂಭಾಗದಲ್ಲೆ ಕಾಂಗ್ರೆಸ್  ಕಾರ್ಪೊರೇಟರ್ ಗೆ ಹಿಗ್ಗಾಮುಗ್ಗಾ ಥಳಿಸಿದ ಘಟನೆ ಗುರುವಾರ ಸಂಜೆ ನಡೆದಿದೆ.

Advertisement

ಕಾಂಗ್ರೆಸ್ ಮಹಿಳಾ ಕಾರ್ಪೊರೇಟರ್ ಮೈದುನ ಮತ್ತು ಬೆಂಬಲಿಗರು 38 ನೇ ವಾರ್ಡ್ ಪಾಲಿಕೆ ಕಾಂಗ್ರೆಸ್ ಕಾರ್ಪೊರೇಟರ್ ಕುಬೇರ ಅವರ ಮೇಲೆ ಹಲ್ಲೆ ನಡೆಸಿದ್ದಾರೆ. ಮೇಯರ್ ಚೇಂಬರ್‌ನಲ್ಲಿ ಕುಬೇರ ಅವರೊಂದಿಗೆ ಕ್ಷುಲ್ಲಕ ವಿಚಾರಕ್ಕೆ ಗಲಾಟೆ ಮಾಡಿಕೊಂಡಿದ್ದ ರವಿ 39 ನೇ ವಾರ್ಡ್ ಪಾಲಿಕೆ ಕಾಂಗ್ರೆಸ್ ಸದಸ್ಯೆ ಶಶಿಕಲಾರ ಮೈದುನ ಎಂದು ತಿಳಿದು ಬಂದಿದೆ.

ಗಲಾಟೆ ಮಾಡಿ ಪಾಲಿಕೆ ಕಚೇರಿಯಿಂದ ಹೊರಬರುತ್ತಿದ್ದಂತೆ ಕುಬೇರ ಮತ್ತು ಸ್ನೇಹಿತ ನಾಗರಾಜ ಮೇಲೆ ರವಿ ಮತ್ತು ಬೆಂಬಲಿಗರು ಹಲ್ಲೆ ಮಾಡಿದ್ದಾರೆ. ಘಟನೆಯ ವಿಡಿಯೋ ಸಿಸಿ ಕೆಮರಾದಲ್ಲಿ ಸೆರೆಯಾಗಿದೆ. ಹಲ್ಲೆ ಬಳಿಕ ವಿಮ್ಸ್‌ನ ಟ್ರಾಮಾ ಕೇರ್ ಗೆ ಕುಬೇರ ದಾಖಲಾಗಿದ್ದು, ಅಲ್ಲಿಯೂ ಕುಬೇರ ಮತ್ತವರ ಸ್ನೇಹಿತರಾದ ನಾಗರಾಜು, ವೀರೇಂದ್ರ ಮೇಲೆ ಗುಂಪು ಕಟ್ಟಿಕೊಂಡು ಬಂದು ಮತ್ತೆ ರವಿ ಆ್ಯಂಡ್ ಗ್ಯಾಂಗ್ ಹಲ್ಲೆ ನಡೆಸಿದ್ದಾರೆ ಎಂದು ಆರೋಪ ಮಾಡಲಾಗಿದೆ. ಹಲ್ಲೆ ಹಿಂದೆ ಹಳೆ‌ ದ್ವೇಷದ ಶಂಕೆ ಇದ್ದು ,ಗಾಂಧಿನಗರ ಪೋಲಿಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

Advertisement

Udayavani is now on Telegram. Click here to join our channel and stay updated with the latest news.

Next