Advertisement

ತವರಿಗೆ ಪ್ರಯಾಣ ಬೆಳೆಸಿದ ಕಾರ್ಮಿಕರು!

01:18 PM May 01, 2020 | Naveen |

ಬಾಳೆಹೊನ್ನೂರು: ಲಾಕ್‌ಡೌನ್‌ ಹಿನ್ನೆಲೆಯಲ್ಲಿ ತಮ್ಮ ಊರಿಗೆ ಹೋಗಲಾರದೆ ಸಮಸ್ಯೆಯಲ್ಲಿದ್ದ ಕೂಲಿ ಕಾರ್ಮಿಕರನ್ನು ಸರ್ಕಾರಿ ಬಸ್‌ನಲ್ಲಿ ಕಳುಹಿಸಿಕೊಡಲಾಗುತ್ತಿದೆ ಎಂದು ಶೃಂಗೇರಿ ಕ್ಷೇತ್ರದ ಶಾಸಕ ಟಿ.ಡಿ.ರಾಜೇಗೌಡ ತಿಳಿಸಿದರು.

Advertisement

ಕಲಾರಂಗ ಕ್ರೀಡಾಂಗಣದಲ್ಲಿ ಕೂಲಿ ಕಾರ್ಮಿಕರಿಗೆ ಮಾಸ್ಕ್ ವಿತರಿಸಿ ಮಾತನಾಡಿ, ಒಂದು ಬಸ್‌ನಲ್ಲಿ 25 ಪ್ರಯಾಣಿಕರು ಪ್ರಯಾಣಿಸಬಹುದಾಗಿದ್ದು, ಕುಂದಾಪುರ ಹಾಗೂ ಹಾನಗಲ್ಲಗೆ 5 ಬಸ್‌ಗಳ ವ್ಯವಸ್ಥೆ ಮಾಡಲಾಗಿದೆ ಎಂದರು. ನೋಂದಣಿ ಮಾಡಿಕೊಂಡ ಕಟ್ಟಡ ಕಾರ್ಮಿಕರಿಗೆ ಸರಕಾರದಿಂದ ಸಹಾಯ ಧನ ನೀಡಬಹುದಾಗಿದೆ. ಖಾಂಡ್ಯ ಹೋಬಳಿಯಿಂದ ಮೂರು ಬಸ್‌ಗಳಲ್ಲಿ ಕಾರ್ಮಿಕರನ್ನು ಪ್ರಯಾಣಿಸಲು ಅವಕಾಶ ಮಾಡಿಕೊಡಲಾಗಿದೆ. ತೋಟದ ಮಾಲೀಕರು ಸಹ ಕಾರ್ಮಿಕರಿಗೆ ಸಹಾಯ ಮಾಡಿದ್ದಾರೆ. ಲಾಕ್‌ ಡೌನ್‌ ಹಿನ್ನೆಲೆಯಲ್ಲಿ ಎಲ್ಲರೂ ಸುರಕ್ಷಿತರಾಗಿ ತಮ್ಮ ಸ್ವಂತ ಊರಿಗೆ ತಲುಪಲಿ ಎಂದು ಹಾರೈಸಿದರು.

ತೋಟದ ಮಾಲೀಕರು ಕೂಲಿ ಕಾರ್ಮಿಕರ ಪ್ರಯಾಣದ ವೆಚ್ಚವನ್ನು ಭರಿಸಿದ್ದಾರೆ. ಅಲ್ಲದೆ ಗ್ರಾಪಂ ವತಿಯಿಂದ ಮಾಸ್ಕ್ ಹಾಗೂ ಸ್ಯಾನಿಟೈಸರ್‌ ವ್ಯವಸ್ಥೆ ಮಾಡಿದ್ದರು. ತಾ.ಪಂ ಸದಸ್ಯ ಪ್ರವೀಣ, ಹೂವಮ್ಮ, ಮಹಮ್ಮದ್‌ ಹನೀಫ್‌, ಮಹಮ್ಮದ್‌ ಜುಹೇಬ್‌, ರವಿಚಂದ್ರ, ಬಿ.ಕೆ. ಮಧುಸೂದನ್‌, ಎಂ.ಎಸ್‌.ಜಯಪ್ರಕಾಶ್‌, ಕೆ.ಎಸ್‌. ಸೋಮಶೇಖರ್‌, ಭಗವಾನ್‌, ಕೆ.ಕೆ.ವೆಂಕಟೇಶ್‌,
ಉಮೇಶ್‌ ಕಲ್ಮಕ್ಕಿ, ಉಪತಹಶೀಲ್ದಾರ್‌ ನಾಗೇಂದ್ರ, ಪೊಲೀಸ್‌ ಸಿಬ್ಬಂದಿ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next