Advertisement

ಮಲ್ಪೆ ಕೊಳ ಬಾಲಕರ ಶ್ರೀರಾಮ ಭಜನ ಮಂದಿರ: ಇಂದು ಬ್ರಹ್ಮ ಕುಂಭಾಭಿಷೇಕ

12:28 AM Apr 10, 2022 | Team Udayavani |

ಮಲ್ಪೆ: ಮಲ್ಪೆ ಕೊಳ ಬಾಲಕರ ಶ್ರೀರಾಮ ಭಜನ ಮಂದಿರದ ಸುವರ್ಣ ಮಹೋತ್ಸವ, ಮಹಾ ಮಂಗಲದ ಅಂಗವಾಗಿ ಎ. 10ರಂದು ಬ್ರಹ್ಮಕುಂಭಾಭಿಷೇಕ ಮತ್ತು ಮಹಾ ಅನ್ನಸಂತರ್ಪಣೆ ನಡೆಯಲಿದೆ.

Advertisement

ಬೆಳಗ್ಗೆ 4.30ರಿಂದ ಗುಜ್ಜರ್‌ಬೆಟ್ಟು ಪರಾರಿ ಮಠ ವೇ| ಮೂ| ಹಯವದನ ಭಟ್‌ ನೇತೃತ್ವದಲ್ಲಿ ಪುಣ್ಯಾಹ ವಾಚನ, ಗಣಪತಿ ಯಾಗ, ಪ್ರಧಾನ ಹೋಮ, ಸಪ್ತದಶೋತ್ತರ ದ್ವಿಶತ ಕಲಶಾರ್ಚನೆ, ಶ್ರೀ ದೇವರಿಗೆ ವಿಶೇಷ ಪ್ರಮಾಣದ ಶರ್ಕರಾಭಿಷೇಕ ಪೂರ್ವಕ ಪಂಚಾಮೃತ ಸ್ನಪನ, 8.45ರ ವೃಷಭ ಲಗ್ನ ಸುಮುಹೂರ್ತದಲ್ಲಿ ಬ್ರಹ್ಮಕುಂಭ ಕಲಶಾಭಿಷೇಕ, 9.30ರಿಂದ ಲಕ್ಷ ತುಳಸಿ ಅರ್ಚನೆ, ಮಧ್ಯಾಹ್ನ 11.30ಕ್ಕೆ ಮಹಾಪೂಜೆ, ಪಲ್ಲಪೂಜೆ, ಮಹಾ ಅನ್ನಸಂತರ್ಪಣೆ, ಸಂಜೆ 5.30ರಿಂದ ಪುಷ್ಪಾಲಂಕಾರ ಪೂಜೆ, ದೀಪಾರಾಧನೆ ಸಹಿತ ರಂಗಪೂಜೆ ನಡೆಯಲಿರುವುದು.

ಸಂಜೆ 7.30ರಿಂದ ನಡೆಯುವ ಧಾರ್ಮಿಕ ಸಭೆಯಲ್ಲಿ ಕಾಣಿಯೂರು ಮಠದ ಶ್ರೀ ವಿದ್ಯಾವಲ್ಲಭತೀರ್ಥ ಸ್ವಾಮೀಜಿ ಆಶೀರ್ವಚನ ನೀಡಲಿದ್ದು, ಯುವ ಬ್ರಿಗೇಡ್‌ನ‌ ಮಾರ್ಗದರ್ಶಕ ಚಕ್ರವರ್ತಿ ಸೂಲಿಬೆಲೆ ಮುಖ್ಯ ಭಾಷಣ ಮಾಡಲಿರುವರು.

ಸಮ್ಮಾನ ಹಾಗೂ ಸಮಾಜಸೇವಾ ಸಂಘ ಸಂಸ್ಥೆ, ವ್ಯಕ್ತಿಗಳಿಗೆ ಗೌರವಧನ, ಆಟೋಟ ಸ್ಫರ್ಧೆಯ ಬಹುಮಾನ ವಿತರಣೆ, ಮಂದಿರದ ಹಿರಿಯ ಸದಸ್ಯರಿಗೆ ಗೌರವ ಸಮರ್ಪಣೆ ನಡೆಯಲಿದೆ.

ನಾಳೆ ಮುಖ್ಯಮಂತ್ರಿ ಭೇಟಿ
ಎ. 11ರಂದು ಸಂಜೆ 5.30ಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಭಜನ ಮಂದಿರಕ್ಕೆ ಭೇಟಿ ನೀಡಲಿದ್ದಾರೆ ಎಂದು ಮಂದಿರದ ಅಧ್ಯಕ್ಷ ಕರುಣಾಕರ್‌ ಎಸ್‌. ಸಾಲ್ಯಾನ್‌ ತಿಳಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next