Advertisement

Balaganuru: ಬಾಡುವ ಬೆಳೆಗಳಿಗೆ ಜೀವ ಕಳೆ ತುಂಬಿದ ಮಳೆ

06:44 PM Aug 09, 2024 | Team Udayavani |

ಬಳಗಾನೂರು:ಪಟ್ಟಣ ಸೇರಿದಂತೆ ಸುತ್ತಲಿನ ಪ್ರದೇಶದಲ್ಲಿ ಕಳೆದ ನಾಲ್ಕು ದಿನಗಳಿಂದ ಸುರಿದ ಮಳೆ ರೈತರು ಬಿತ್ತಿದ ಬೆಳೆಗಳು ತೇವಾಂಶ ಕೊರತೆಯಿಂದಾಗಿ ಬಾಡುವ ಹಂತ ತಲುಪಿದ್ದ ಖುಷ್ಕಿ ಬೆಳೆಗಳು ಹಾಗೂ ನಾಟಿಮಾಡಿದ ಭತ್ತದ ಬೆಳೆಗೆ ಜೀವಕಳೆ ತುಂಬಿದೆ ಅಲ್ಲದೆ ಭತ್ತ ನಾಟಿ ಕಾರ್ಯಕ್ಕೆ ಮಳೆರಾಯ ಕೈಜೋಡಿಸಿದಂತಾಗಿದೆ.

Advertisement

ಪಟ್ಟಣ ಸೇರಿ ಸುತ್ತಲಿನ ಪ್ರದೇಶದಲ್ಲಿ ಮೋಡ ಕವಿದ ವಾತಾವರಣವಿದ್ದು ಮಂಗಳವಾರ 49 ಮೀಲಿಮೀಟರ್ ಬುಧುವಾರ 32ಮಿಲೀಮೀಟರ್ ಗುರುವಾರ 04 ಮೀಲಿಮೀಟರ್ ಶುಕ್ರವಾರ 6.4 ಮಿಲಿಮೀಟರ್ ಸುರಿದ ಮಳೆಗೆ ರೈತರ ಮೊಗದಲ್ಲಿ ಹರ್ಷ ಮತ್ತು ನೆಮ್ಮದಿ ತಂದಿದೆ.

ರೈತರು ಖುಷ್ಕಿ ಭೂಮಿಯಲ್ಲಿ ಬಿತ್ತಿದ ಬೆಳೆಗಳಾದ ಹತ್ತಿ,ತೊಗರಿ, ಸಜ್ಜೆ, ನೆವಣಿ, ಉದ್ದು, ಸೂರ್ಯಕಾಂತಿ ಸೇರಿ ಇತರೆ ಹುಲುಸಾಗಿ ಬೆಳೆದ ಬೆಳೆಗಳು ತೇವಾಂಶ ಕೊರತೆಯಿಂದಾಗಿ ಬಾಡುತ್ತಿರುವ ಹಿನ್ನೆಲೆಯಲ್ಲಿ ರೈತರಲ್ಲಿ ಆತಂಕ ಉಂಟಾಗಿತ್ತು. ಕಳೆದ ಮೂರು ದಿನಗಳಿಂದ ಸುರಿದ ಮಳೆ ರೈತರಲ್ಲಿ ಮನೆ ಮಾಡಿದ್ದ ಆತಂಕವನ್ನು ದೂರ ಮಾಡಿದೆ.

ತುಂಗಭದ್ರ ಎಡದಂಡೆ ನಾಲೆಗೆ ಕಳೆದ 25 ದಿನಗಳ ಹಿಂದೆ ನೀರು ಬಿಟ್ಟಿರುವ ಹಿನ್ನೆಲೆಯಲ್ಲಿ ಈಗಾಗಲೇ ಭತ್ತದ ಸಸಿ ಮಡಿಗಳ ಮೂಲಕ ಭತ್ತದ ಸಸಿಗಳನ್ನು ಬೆಳಸಿ ಸಿದ್ದತೆ ಮಾಡಿಕೊಂಡಿದ್ದ ರೈತರು.

Advertisement

Udayavani is now on Telegram. Click here to join our channel and stay updated with the latest news.

Next