Advertisement

ಸ್ವಂತ ಸಹೋದರನನ್ನೇ ಸೋಲಿಸಿ ಬಿಜೆಪಿ ಗೆಲ್ಲಿಸಿದ ರಮೇಶ: ಬಾಲಚಂದ್ರ ಜಾರಕಿಹೊಳಿ

04:32 PM Dec 07, 2021 | Team Udayavani |

ಬೆಳಗಾವಿ: ಎಲ್ಲ ಕಡೆಗೂ ರಮೇಶ ಜಾರಕಿಹೊಳಿ ಬಗ್ಗೆ ಏನೇನೋ ಮಾತನಾಡುತ್ತಿದ್ದಾರೆ.‌ ರಮೇಶ ಜಾರಕಿಹೊಳಿಯವರು ಲೋಕಸಭೆ ಉಪಚುನಾವಣೆಯಲ್ಲಿ ಸ್ವಂತ ತಮ್ಮನನ್ನು ಸೋಲಿಸಿ ಬಿಜೆಪಿ ಮಂಗಲಾ ಅಂಗಡಿಯನ್ನು ಗೆಲ್ಲಿಸಿದ್ದಾರೆ‌ ಎಂದು ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ ಹೇಳಿದರು.

Advertisement

ಬೆಳಗಾವಿ ಹೊರ ವಲಯದ ಕಿಣಯೇ-ಜಾಂಬೋಟಿ ಮಾರ್ಗದಲ್ಲಿರುವ ರೆಜೆಂಟಾ ರೆಸಾರ್ಟ್ ನಲ್ಲಿ ಮಂಗಳವಾರ ವಿಧಾನ ಪರಿಷತ್ ಚುನಾವಣೆ ಹಿನ್ನೆಲೆಯಲ್ಲಿ  ನಡೆದ ಬಿಜೆಪಿ ಪದಾಧಿಕಾರಿಗಳ ಸಭೆಯಲ್ಲಿ ಅವರು ಮುಖ್ಯಮಂತ್ರಿಗಳ ಎದುರು ಮಾತನಾಡಿದರು.

ರಮೇಶ ಜಾರಕಿಹೊಳಿ ಮತ್ತು ಅಭಯ ಪಾಟೀಲ ಅವರು ತಮ್ಮ‌ ಕ್ಷೇತ್ರಗಳಲ್ಲಿ ಹೆಚ್ಚಿನ ಲೀಡ್ ನೀಡದಿದ್ದರೆ ಮಂಗಲಾ ಗೆಲ್ಲಲು ಆಗುತ್ತಿರಲಿಲ್ಲ. ಈ ಚುನಾವಣೆಯಲ್ಲಿ ಬಿಜೆಪಿಯ ಮಹಾಂತೇಶ ಕವಟಗಿಮಠ ಗೆಲ್ಲಿಸಿ,  ಕಾಂಗ್ರೆಸ್ ಸೋಲಿಸೋಣ ಎಂದಿದ್ದು ತಪ್ಪೇನಿದೆ. ಇಲ್ಲಿರುವ ಯಾರೂ ರಮೇಶ ಜಾರಕಿಹೋಳಿ ಬಗ್ಗೆ ಯಾರೂ ಅನುಮಾನಪಡುವ ಅಗತ್ಯವಿಲ್ಲ ಎಂದರು.

ನಾವೆಲ್ಲ ಬಿಜೆಪಿ ಅಭ್ಯರ್ಥಿ ಮಹಾಂತೇಶ ಕವಟಗಿಮಠ ಪರ ಪ್ರಚಾರ ಮಾಡುತ್ತಿದ್ದೇವೆ. ಬಿಜೆಪಿ ಗೆಲ್ಲಿಸಿ, ಕಾಂಗ್ರೆಸ್ ಸೋಲಿಸಿ ಎನ್ನುವುದು ನಮ್ಮ ಬಯಕೆಯಾಗಿದೆ. ಮಹಾಂತೇಶ ಕವಟಗಿಮಠ ಈ ಚುನಾವಣೆಯಲ್ಲಿ ಗೆಲುವು ಸಾಧಿಸಲಿದ್ದಾರೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next