Advertisement

ಇಂದು ಬಾಳ ಸಾಹೇಬ್‌ ಠಾಕ್ರೆ ಅವರು ಇರಬೇಕಾಗಿತ್ತು: ರಾಜ್‌ ಠಾಕ್ರೆ

09:53 AM Nov 10, 2019 | mahesh |

ಮುಂಬಯಿ: ಅಯೋಧ್ಯೆ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್‌ ನೀಡಿರುವ ತೀರ್ಪನ್ನು ಸ್ವಾಗತಿಸುತ್ತೇನೆ. ಹಾಗೆಯೇ ಈ ನಿರ್ಣಯವನ್ನು ಕೇಳಲು ಇಂದು ಬಾಳ್‌ ಸಾಹೇಬ್‌ ಠಾಕ್ರೆ ಅವರು ಇರಬೇಕಾಗಿತ್ತು. ಅವರು ತುಂಬಾ ಸಂತೋಷ ಪಡುತ್ತಿದ್ದರು ಎಂದು   ಅವರು ಹೇಳಿದರು.

Advertisement

ಕಳೆದ ಹಲವು ದಶಕಗಳಿಂದ ನಡೆಯುತ್ತಿರುವ ರಾಮ ಜನ್ಮಭೂಮಿ ವಿವಾದದ ಬಗ್ಗೆ ಸುಪ್ರೀಂ ಕೋರ್ಟ್‌ ಇಂದು ತೀರ್ಪು ನೀಡಿದೆ. ಈ ಫಲಿತಾಂಶವು ವಿವಾದಿತ ಭೂಮಿಯಲ್ಲಿ ರಾಮ ದೇವಾಲಯ ನಿರ್ಮಾಣಕ್ಕೆ ದಾರಿ ಮಾಡಿಕೊಟ್ಟಿದೆ. ಫಲಿತಾಂಶದಿಂದ ದೇಶಾದ್ಯಂತ ಹರ್ಷ ವ್ಯಕ್ತಪಡಿಸಲಾಗುತ್ತಿದೆ ಎಂದರು.

‘ಇಂದು ಬಹಳ ಸಂತೋಷದ ದಿನ. ಅಯೋಧ್ಯೆಯ ರಾಮ ದೇವಾಲಯಕ್ಕಾಗಿ ಅನೇಕರು ಮಾಡಿದ ತ್ಯಾಗಗಳು ಇಂದು ಅರ್ಥಪೂರ್ಣವಾಗಿವೆ. ದೇಶದ ಜನರ ಭಾವನೆ ಮತ್ತು ವಾಸ್ತವತೆಯನ್ನು ಗಣನೆಗೆ ತೆಗೆದುಕೊಂಡು ಸುಪ್ರೀಂ ಕೋರ್ಟ್‌ ತೆಗೆದುಕೊಂಡ ತೀರ್ಪನ್ನು ಅಭಿನಂದಿಸುತ್ತೇನೆ ಎಂದು ರಾಜ್‌ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next