Advertisement

ಪಿಎಸ್ ಐ ಪರೀಕ್ಷಾ ಅಕ್ರಮದ ರೂವಾರಿ ಆರ್ ಡಿ ಪಾಟೀಲಗೆ ಜಾಮೀನು: ನಾಮಪತ್ರ ಸಲ್ಲಿಕೆ

02:52 PM Apr 17, 2023 | Team Udayavani |

ಕಲಬುರಗಿ: ಪಿಎಸ್ ಐ ಪರೀಕ್ಷಾ ಅಕ್ರಮದಲ್ಲಿ ಪ್ರಮಖ ಪಾತ್ರ ವಹಿಸಿದ್ದ ಆರೋಪ ಹೊತ್ತಿರುವ ಆರ್.ಡಿ.ಪಾಟೀಲ ಅವರಿಗೆ ಹೈಕೋರ್ಟ್ ಜಾಮೀನು ಹಾಗೂ ಪ್ರಕರಣದ ವಿಚಾರಣೆಗೆ ತಡೆಯಾಜ್ಞೆ ನೀಡಿದೆ.

Advertisement

ಆರ್.ಡಿ.ಪಾಟೀಲ ಅಫಜಲಪುರ ವಿಧಾನಸಭಾ ಕ್ಷೇತ್ರದಿಂದ ಸ್ವತಂತ್ರ ಅಭ್ಯರ್ಥಿಯಾಗಿ ಸೋಮವಾರ ಬೆಳಗ್ಗೆ ಪೊಲೀಸ್ ಭದ್ರತೆಯಲ್ಲಿ ನಾಮಪತ್ರ ಸಲ್ಲಿಸಿದರು.

ಕಳೆದ ಎರಡು ದಿನಗಳ ಹಿಂದೆ ನಾಮಪತ್ರ ಸಲ್ಲಿಸಲು ಬೇಕಾಗಿರುವ ಎಲ್ಲ ತಾಂತ್ರಿಕ ಜರೂರಿ ಕೆಲಸ ಮುಗಿಸಿದ್ದಾಗಿ ತಿಳಿದು ಬಂದಿದೆ.

ಅಲ್ಲದೆ ಎಲ್ಲ ಪ್ರಕರಣಗಳು ಒಂದೇ ಬೆಂಚಿನಡಿ ತಂದು ಚುನಾವಣೆ ಮುಗಿಯುವವರೆಗೆ ವಿಚಾರಣೆಗೆ ಸ್ಟೇ ನೀಡಬೇಕು ಎಂದು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next