Advertisement

ಬೈಕಂಪಾಡಿ: ಚುರುಕುಗೊಂಡ ತರಕಾರಿ, ಹಣ್ಣುಹಂಪಲು ಸಗಟು ವ್ಯಾಪಾರ

01:03 PM Apr 15, 2020 | sudhir |

ಮಂಗಳೂರು: ನಗರದ ಸೆಂಟ್ರಲ್‌ ಮಾರ್ಕೆಟ್‌ನ ತರಕಾರಿ ಹಾಗೂ ಹಣ್ಣು ಹಂಪಲುಗಳ ಸಗಟು ವ್ಯಾಪಾರವನ್ನು ಬೈಕಂಪಾಡಿ ಎಪಿಎಂಸಿ ಯಾರ್ಡ್‌ಗೆ ಸ್ಥಳಾಂತರಿಸಲಾಗಿದ್ದು, ಕಳೆದ ಒಂದು ವಾರದಿಂದ ಇಲ್ಲಿ ವ್ಯಾಪಾರ ವಹಿವಾಟು ನಡೆಯುತ್ತಿದೆ.

Advertisement

ಲಾಕ್‌ಡೌನ್‌ ಜಾರಿಗೆ ಬಂದ ಬಳಿಕ ಅಲ್ಲಿ ಗ್ರಾಹಕರ ದಟ್ಟಣೆಯಿಂದಾಗಿ ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಸಾಧ್ಯವಾಗದ ಕಾರಣ ಸಗಟು ವ್ಯಾಪಾರವನ್ನು ಬೈಕಂಪಾಡಿಗೆ ಸ್ಥಳಾಂತರಿಸಲಾಗಿತ್ತು. ಜತೆಗೆ ಮಾರ್ಕೆಟ್‌ ಅನ್ನು ಮುಚ್ಚಿ ರಿಟೇಲ್‌ ವ್ಯಾಪಾರವನ್ನೂ ರದ್ದು ಪಡಿಸಲಾಗಿತ್ತು.

ಮೊದಲು ಬೈಕಂಪಾಡಿಗೆ ತೆರಳಲು ನಿರಾಕರಿಸಿದ್ದು, ರಸ್ತೆ ಬದಿ ಎಲ್ಲೆಂದರಲ್ಲಿ ಸರಕು ಇಳಿಸಿ ರಿಟೇಲ್‌ ವ್ಯಾಪಾರಿಗಳಿಗೆ ನೀಡಲಾಗುತ್ತಿತ್ತು. ಈ ಹಿನ್ನೆಲೆಯಲ್ಲಿ ಎ.7ರಂದು ಜಿಲ್ಲಾಡಳಿತವು ಸಭೆ ನಡೆಸಿ ವ್ಯಾಪಾರ ವಹಿವಾಟು ಸ್ಥಳಾಂತರದ ಆವಶ್ಯಕತೆಯನ್ನು ಮನದಟ್ಟು ಮಾಡಿದ್ದಲ್ಲದೆ, ರಸ್ತೆ ಬದಿ ಸರಕು ಇಳಿಸಿದರೆ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಸಿತ್ತು. ಬಳಿಕ ಸಗಟು ವ್ಯಾಪಾರ ಬೈಕಂಪಾಡಿಗೆ ಸ್ಥಳಾಂತರವಾಗಿದೆ. ಆದರೆ, ರಿಟೇಲ್‌ ವ್ಯಾಪಾರಿಗಳಿಗೆ ಇನ್ನೂ ಪರ್ಯಾಯ ಜಾಗ ಸಿಕ್ಕಿಲ್ಲ.
ಈ ನಡುವೆ ಸೆಂಟ್ರಲ್‌ ಮಾರ್ಕೆಟ್‌ ನಲ್ಲಿ ಇರುವ ಎರಡೂ ಕಟ್ಟಡ ಗಳನ್ನು ಕೆಡವಿ ಅಲ್ಲಿ ಸ್ಮಾರ್ಟ್‌ ಸಿಟಿ ಯೋಜನೆಯಡಿ ಹೊಸ, ಸುಸಜ್ಜಿತ ಮಾರ್ಕೆಟ್‌ ಕಟ್ಟಡವನ್ನು ನಿರ್ಮಿಸಲು ತೀರ್ಮಾನಿಸಲಾಗಿದೆ. ರಿಟೇಲ್‌ ವ್ಯಾಪಾರಿಗಳಿಗೆ ತಾತ್ಕಾಲಿಕ ಮಾರ್ಕೆಟ್‌ ಕಟ್ಟಡವನ್ನು ನಿರ್ಮಿಸಿ ಕೊಡುವ ಉದ್ದೇಶವಿದ್ದು, ಮೂರು ತಿಂಗಳಲ್ಲಿ ಇದರ ಕಾಮಗಾರಿ ಪೂರ್ತಿ ಯಾಗುವ ನಿರೀಕ್ಷೆಯಿದೆ.

Advertisement

Udayavani is now on Telegram. Click here to join our channel and stay updated with the latest news.

Next