Advertisement

ಕನ್ನಂಪಲ್ಲಿ ಕೆರೆಗೆ ಶಾಸಕ ಕೃಷ್ಣಾ ರೆಡ್ಡಿ ದಂಪತಿ ಬಾಗಿನ

02:21 PM Nov 29, 2020 | Suhan S |

ಚಿಂತಾಮಣಿ: ನಗರದ ಜೀವಜಲ ಮೂಲವಾಗಿರುವ ಕನ್ನಂಪಲ್ಲಿ ಕೆರೆ ಕಳೆದ ಎರಡು ದಿನಗಳಿಂದ ಬಿದ್ದ ಮಳೆಗೆ ಕೋಡಿ ಹರಿಯುತ್ತಿದ್ದು, ಶಾಸಕ ಜೆ.ಕೆ.ಕೃಷ್ಣಾರೆಡ್ಡಿ ದಂಪತಿ ತಮ್ಮ ಅಪಾರ ಬೆಂಬಲಿಗರೊಂದಿಗೆ ಶನಿವಾರ ವಿಶೇಷ ಪೂಜೆ ಸಲ್ಲಿಸಿ ಬಾಗಿನ ಅರ್ಪಿಸಿದರು.

Advertisement

ಬೆಳಗ್ಗೆ ಕೆರೆಯ ಬಳಿ ತೆರಳಿ ವೇದಪಂಡಿತರು ಹಾಗೂ ವಾದ್ಯಮೇಳಗಳೊಂದಿಗೆ ಪೂಜೆ ಸಲ್ಲಿಸಿ ಬಾಗಿನ ಅರ್ಪಿಸಿದರು. ನಂತರ ಗಂಗಾಮಾತೆಯನ್ನುಅಲಂಕೃತ ತೆಪ್ಪದಲ್ಲಿಕೂರಿಸಿ ಕೆರೆಪ್ರದಕ್ಷಿಣೆ ಮಾಡಲಾಯಿತು ಹಾಗೂ ನಾರಸಿಂಹಪೇಟೆಯ ಗ್ರಾಮದೇವತೆ ಗಂಗಮ್ಮನವರಿಗೆ ಪೂಜೆ ಸಲ್ಲಿಸಿ ಅಲಂಕೃತ ಪಲ್ಲಕ್ಕಿ ಮುಖಾಂತರ ಮೆರವಣಿಗೆ ಮಾಡಲಾಯಿತು.

ಶಾಸಕ ಜೆ.ಕೆ.ಕೃಷ್ಣಾರೆಡ್ಡಿ ಪತ್ರಿಕೆಯೊಂದಿಗೆ ಮಾತನಾಡಿ, ತಾನೂ ಶಾಸಕನಾದ ಬಳಿಕ ಕನ್ನಂಪಲ್ಲಿ ಕೆರೆ ಮೂರನೇ ಬಾರಿಗೆ ತುಂಬಿ ಕೋಡಿ ಹರಿಯುತಿರುವುದು ಸಂತಸದ ವಿಷಯ ವಾಗಿದ್ದು, ಪ್ರತಿವರ್ಷ ಇದೇ ರೀತಿ ತಾಲೂಕಿನ ಎಲ್ಲಾ ಕೆರೆಗಳು ತುಂಬಿ ಕೋಡಿ ಹರಿದು ಸಕಾಲಕ್ಕೆ ಜನಜಾನುವಾರುಗಳಿಗೆ ಮೇವು, ದೊರೆಯಲಿ ಎಂದು ದೇವರಲ್ಲಿ ಪ್ರಾರ್ಥಿಸಿರುವುದಾಗಿ ತಿಳಿಸಿದರು.

ಬಾಗಿನ ವೇಳೆ ಚಿಂತಾಮಣಿ ನಗರ ಹಾಗೂ ಸುತ್ತಮುತ್ತಲಿನ ಗ್ರಾಮಗಳ ಜನತೆ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು. ತಹಶೀಲ್ದಾರ್‌ ಹನುಮಂತರಾಯಪ್ಪ, ನಗರಸಭೆ ಪರಿಸರ ಅಭಿಯಂತರ ಉಮಾಶಂಕರ್‌, ಆರತಿ, ಬಿಇಒ ಸುರೇಶ್‌, ತಾಲೂಕು ಆರೋಗ್ಯಾಧಿಕಾರಿ ಸ್ವಾತಿ ಸೇರಿದಂತೆ ನಗರಸಭೆ ಸದಸ್ಯರು, ಸಿಬ್ಬಂದಿ ಉಪಸ್ಥಿತರಿದ್ದರು ಚಿಂತಾ ಮಣಿ ಗ್ರಾಮಾಂತರ ಪೊಲೀಸ್‌ ಠಾಣೆ ಆರಕ್ಷಕ ವೃತ್ತ ನಿರೀಕ್ಷಕ ಶ್ರೀನಿವಾಸಪ್ಪ ಹಾಗೂ ಗ್ರಾಮಾಂತರ ಠಾಣೆ ಪಿಎಸ್‌ಐ ನರೇಶ್‌ ನೇತೃತ್ವದಲ್ಲಿ ಪೊಲೀಸ್‌ ಬಂದೋಬಸ್‌ ವ್ಯವಸ್ಥೆ ಮಾಡಲಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next