Advertisement

‘ಬಘೀರ’ ನಾಗಿ ತೆರೆಮೇಲೆ ಬರುತ್ತಿದ್ದಾನೆ ಶ್ರೀ ಮುರಳಿ

06:26 PM Dec 17, 2020 | Adarsha |

ಬೆಂಗಳೂರು: ಸ್ಯಾಂಡಲ್ ವುಡ್ ನ ರೋರಿಂಗ್ ಸ್ಟಾರ್ ಎಂದೇ ಖ್ಯಾತರಾಗಿರುವ ಮುರಳಿ ತಮ್ಮ ಜನ್ಮ ದಿನದಂದು   ಅಭಿಮಾನಿಗಳಿಗೆ ಭಾರಿ ಸರ್ಪೈಸ್ ನೀಡಿದ್ದಾರೆ. ಬೆಳಿಗ್ಗೆಯಷ್ಟೆ ಮುರುಳಿ   ಅವರ ‘ಮದಗಜ’ ಸಿನಿಮಾದ ಫಸ್ಟ್ ಲುಕ್ ಟೀಸರ್ ಬಿಡುಗಡೆಯಾಗಿದ್ದು, ಇದೀಗ ಮತ್ತೊಂದು ಸಿನಿಮಾ ಘೋಷಿಸಿದೆ.

Advertisement

‘ಲಕ್ಕಿ’ ಸಿನಿಮಾ ಖ್ಯಾತಿಯ ನಿರ್ದೇಶಕ ಡಾ. ಸೂರಿ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಈ ಸಿನಿಮಾಕ್ಕೆ ‘ಬಘೀರ’ ಎಂದು ನಾಮಕರಣ ಮಾಡಲಾಗಿದ್ದು, ಕೆಜಿಎಫ್ ಖ್ಯಾತಿಯ ಪ್ರಶಾಂತ್ ನೀಲ್ ಚಿತ್ರದ ಶೀರ್ಷಿಕೆ ಬಿಡುಗಡೆಗೊಳಿಸಿದ್ದಾರೆ.

ಚಿತ್ರದ ಪೋಸ್ಟರ್ ನಲ್ಲಿ ನಟ ಶ್ರೀ ಮುರಳಿ ಪೊಲೀಸ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದು. ಪೋಸ್ಟರ್ ಸಾಮಾಜಿಕ ಜಾಲತಾಣಗಳಲ್ಲಿ ಬಾರಿ ವೈರಲ್ ಆಗಿದೆ. ಈ ಚಿತ್ರದ ಕುರಿತಾದ ಯಾವುದೇ ಮಾಹಿತಿಯನ್ನು ಚಿತ್ರತಂಡ ಈ ವರೆಗೂ ತಿಳಿಸಿಲ್ಲವಾದರೂ ಪೋಸ್ಟರ್ ಗಮನಿಸುವಾಗ ಇದೊಂದು ಪಕ್ಕಾ ಕಮರ್ಷಿಯಲ್ ಆ್ಯಕ್ಷನ್ ಚಿತ್ರದ ರೀತಿ ಕಂಡುಬರುತ್ತಿದೆ.

ಇದನ್ನೂ ಓದಿ:ಏ.2ಕ್ಕೆ ರಾಬರ್ಟ್‌ ತೆರೆಗೆ?

ಇತ್ತೀಚೆಗಷ್ಟೆ ನಿರ್ದೇಶಕ ಪ್ರಶಾಂತ್ ನೀಲ್ ಹಾಗೂ ಬಾಹುಬಲಿ ಖ್ಯಾತಿಯ ನಟ ಪ್ರಭಾಸ್ ಕಾಂಬಿನೇಷನ್ ನಲ್ಲಿ ಮೂಡಿಬರುತ್ತಿರುವ ಪ್ಯಾನ್ ಇಂಡಿಯಾ ಸಿನಿಮಾವಾದ ‘ಸಲಾರ್’  ಚಿತ್ರವನ್ನು ಘೋಷಿಸಿದ್ದ  ಹೊಂಬಾಳೆ ಫಿಲ್ಸ್ಂ ಈ ಚಿತ್ರಕ್ಕೆ ಹಣ ಹೂಡಿಕೆ ಮಾಡುತ್ತಿದೆ. ಇದು ಈ ಸಂಸ್ಥೆಯ 8ನೇ ಸಿನಿಮಾ ಆಗಿದೆ.

Advertisement

ಈ ಚಿತ್ರಕ್ಕೆ  ಸ್ವತಹಾ ಪ್ರಶಾಂತ್ ನೀಲ್ ಅವರೆ ಕಥೆ ಹಾಗೂ ಚಿತ್ರಕಥೆಯನ್ನು ರಚಿಸಿದ್ದು, ಖ್ಯಾತ ಸಂಗೀತ ನಿರ್ದೇಶಕ ರವಿ ಬಸ್ರೂರ್ ಸಿನಿಮಾದ ಸಂಗೀತ ಸಂಯೋಜನೆಯ ಜವಾಬ್ದಾರಿಯನ್ನು ವಹಿಸಿಕೊಂಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next