Advertisement

ಭಗವಾನ್‌ ಮಹಾವೀರ-ಡಾ|ಜಗಜೀವನರಾಮ್‌ ಜಯಂತಿ

06:05 PM Apr 07, 2020 | Naveen |

ಬಾಗಲಕೋಟೆ: ಜಿಲ್ಲಾಡಳಿತದಿಂದ ಭಗವಾನ್‌ ಮಹಾವೀರ ಜಯಂತಿ ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ಸೋಮವಾರ ಸರಳವಾಗಿ ಆಚರಿಸಲಾಯಿತು. ಜಿಲ್ಲಾಧಿಕಾರಿ ಕ್ಯಾಪ್ಟನ್‌ ಡಾ|ಕೆ. ರಾಜೇಂದ್ರ ಅವರು ಭಗವಾನ್‌ ಮಹಾವೀರರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಪುಷ್ಪನಮನ ಅರ್ಪಿಸಿದರು. ಜಿಪಂ ಸಿಇಒ ಗಂಗೂಬಾಯಿ ಮಾನಕರ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಬಸವರಾಜ ಶಿರೂರ, ಕೃಷಿ ಇಲಾಖೆಯ ಉಪ ನಿರ್ದೇಶಕ ಕೊಂಕವಾಡ ಉಪಸ್ಥಿತರಿದ್ದರು.

Advertisement

ಡಾ|ಬಾಬು ಜಗಜೀವನರಾಮ್‌ ಜಯಂತಿ: ದೇಶದ ಮಾಜಿ ಉಪ ಪ್ರಧಾನಿ ಹಾಗೂ ಹಸಿರು ಕ್ರಾಂತಿಯ ಹರಿಕಾರ ಡಾ| ಬಾಬು ಜಗಜೀವನರಾಮ್‌ ಜಯಂತಿ ಆಚರಿಸಲಾಯಿತು. ಬೆನಕಟ್ಟಿ ಗ್ರಾಮದಲ್ಲಿ ಕೊರೊನಾ
ಲಾಕ್‌ಡೌನ್‌ ಹಿನ್ನೆಲೆಯಲ್ಲಿ ಡಾ|ಬಾಬು ಜಗಜೀವನರಾಮ್‌ ಮತ್ತು ಡಾ|ಬಿ. ಆರ್‌ ಅಂಬೇಡ್ಕರ್‌ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವುದರ ಮೂಲಕ ಸರಳ ರೀತಿಯಲ್ಲಿ ಅವರ ಜಯಂತಿ ಆಚರಿಸಿ ಕೊರೊನಾ ಮುಕ್ತವಾಗಲಿ ಎಂದು ಪ್ರಾರ್ಥಿಸಲಾಯಿತು. ಡಾ| ಬಾಬು ಜಗಜೀವನರಾಮ್‌ ಗ್ರಾಮೀಣ ಅಭಿವೃದ್ಧಿ ಸಂಸ್ಥೆಯ ಅಧ್ಯಕ್ಷ ಹನಮಂತ ಮಾದರ, ಉಪಾಧ್ಯಕ್ಷ ಮಲ್ಲು ಬಡಿಗೇರ, ಕಾರ್ಯದರ್ಶಿ ನಾಗರಾಜ ಕಟ್ಟಿಮನಿ, ಖಜಾಂಚಿ ಕನಕಪ್ಪ ಮಾದರ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next