Advertisement

Bagalkote: 2025ಕ್ಕೆ 1 ಲಕ್ಷ ಟನ್‌ ಕಬ್ಬು ನುರಿಸುವ ಗುರಿ

06:18 PM Oct 25, 2023 | Team Udayavani |

ಬಾಗಲಕೋಟೆ: ನಿರಾಣಿ ಉದ್ಯಮ ಸಮೂಹ ಈಗಾಗಲೇ ಇಥೇನಾಲ್‌ ಉತ್ಪಾದನೆಯಲ್ಲಿ ದೇಶದಲ್ಲಿಯೇ ನಂ. 1 ಸ್ಥಾನದಲ್ಲಿದ್ದು, 2025ರ ವೇಳೆಗೆ 1 ಲಕ್ಷ ಟನ್‌ ಕಬ್ಬು ಕಬ್ಬು ನುರಿಸುವ ಸಾಮರ್ಥ್ಯ ಹೆಚ್ಚಿಸಿಕೊಳ್ಳುವ ಮೂಲಕ ಸಕ್ಕರೆ ಉತ್ಪಾದನೆಯಲ್ಲಿಯೂ ನಂ.1 ಸ್ಥಾನಕ್ಕೆ ಏರಲಿದೆ ಎಂದು ಮಾಜಿ ಸಚಿವ ಮುರುಗೇಶ ನಿರಾಣಿ ಹೇಳಿದರು.

Advertisement

ಮುಧೋಳದ ನಿರಾಣಿ ಶುಗರ್ಸ್‌ ಕಾರ್ಖಾನೆಯಲ್ಲಿ ನಡೆದ 2023-24ನೇ ಸಾಲಿನ  ಕಬ್ಬು ನುರಿಸುವ ಹಂಗಾಮು ಪ್ರಾರಂಭದ
ನಿಮಿತ್ತ ಆಯೋಜಿಸಿದ ಸನ್‌ 2023-24ನೇ ಸಾಲಿನ ಬಾಯ್ಲರ್‌ ಅಗ್ನಿ ಪ್ರದೀಪನ ಹಾಗೂ ಕೇನ್‌ ಕ್ಯಾರಿಯರ್‌ ಪೂಜಾ ಕಾರ್ಯಕ್ರಮದಲ್ಲಿ ಮಾತನಾಡಿದರು.

ಕಳೆದ 25 ವರ್ಷಗಳಲ್ಲಿ ನಿರಾಣಿ ಸಮೂಹ ದೇಶದ ಅತಿ ಚಿಕ್ಕ ಕಾರ್ಖಾನೆಯಿಂದ ಆರಂಭಗೊಂಡು, ಇಂದು ದೇಶದ ದೊಡ್ಡ
ಕಾರ್ಖಾನೆಯಾಗಿ ಬೆಳೆದಿದೆ. ಇದಕ್ಕೆ ರೈತ ಕುಟುಂಬಗಳ ಪ್ರೀತಿ, ಅಭಿಮಾನ ಹಾಗೂ ನಿರಾಣಿ ಸಮೂಹದ ಮೇಲೆ ಅವರಿಟ್ಟ ವಿಶ್ವಾಸವೇ ಕಾರಣ ಎಂದು ಹೇಳಿದರು.

ಪ್ರಧಾನಿ ನರೇಂದ್ರ ಮೋದಿ ಅವರ ಆಶಯಕ್ಕೆ ಅನುಗುಣವಾಗಿ ನಿರಾಣಿ ಸಮೂಹ, ಇಂಧನ ಕ್ಷೇತ್ರದಲ್ಲಿ ದಿಟ್ಟ ಹೆಚ್ಚೆ ಇಟ್ಟಿದೆ. ಈಗಾಗಲೇ ಇಥೆನಾಲ್‌ ಉತ್ಪಾದನೆಯಲ್ಲಿ ನಿರಾಣಿ ಸಮೂಹ ಜಗತ್ತಿನಲ್ಲಿ ಅಗ್ರ ಸ್ಥಾನದಲ್ಲಿದೆ. ಸಾಯಿಪ್ರೀಯಾ ಶುಗರ್ಸ್‌ ಆವರಣದಲ್ಲಿ ಸಿಎನ್‌ಜಿ ಉತ್ಪಾದನೆಯನ್ನು ಪ್ರಾಯೋಗಿಕವಾಗಿ ನಡೆಸಿ ಯಶಸ್ವಿಯಾಗಿದ್ದು, ಮುಂದಿನ ದಿನಗಳಲ್ಲಿ ಎಲ್ಲ
ಕಾರ್ಖಾನೆಗಳಿಗೆ ಇದು ವಿಸ್ತರಣೆಯಾಗಲಿದೆ ಎಂದರು.

ರೈತ ಬೆಳೆದ ಕಬ್ಬಿಗೆ ಈಗ ನಿಶ್ಚಿತ ಮಾರುಕಟ್ಟೆ ಲಭಿಸಿದೆ. ಕಬ್ಬು ರೈತರಿಗೆ ಒಳ್ಳೆಯ ಆದಾಯ ತಂದು ಕೊಡುತ್ತಿದೆ. ಕೇಂದ್ರ ಸರ್ಕಾರದ ಇಬಿಪಿ ನೀತಿಯು ರೈತರನ್ನು ರಾಷ್ಟ್ರೀಯ ಇಂಧನ ಉತ್ಪಾದಕನನ್ನಾಗಿ ಪರಿವರ್ತಿಸಲಿದೆ. ಇದು ಇಂಧನ ಕ್ಷೇತ್ರದಲ್ಲಿ ಬಹುದೊಡ್ಡ ಕ್ರಾಂತಿಗೆ ಕಾರಣವಾಗಲಿದೆ. ಈ ಹಂಗಾಮಿನಲ್ಲಿಯೂ ರೈತರು ನಿರಾಣಿ ಸಮೂಹದ ಕಾರ್ಖಾನೆಗಳಿಗೆ ಹೆಚ್ಚಿನ ಪ್ರಮಾಣದಲ್ಲಿ ಕಬ್ಬು ನೀಡಿ ಹಂಗಾಮು ಯಶಸ್ವಿಗೊಳಿಸಬೇಕು ಎಂದು ಕೋರಿದರು.

Advertisement

ಕೇವಲ 500 ಮೆಟ್ರಿಕ್‌ ಟನ್‌ ಕಬ್ಬು ನುರಿಸುವ ಕಾರ್ಖಾನೆಯಿಂದ ಆರಂಭಗೊಂಡ ನಿರಾಣಿ ಉದ್ಯಮ ಸಮೂಹ, ಇಂದು
ಬಾಗಲಕೋಟೆ ಜಿಲ್ಲೆಯಲ್ಲಿಯೇ ಸುಮಾರು ಆರು ಸಕ್ಕರೆ ಕಾರ್ಖಾನೆಗಳನ್ನು ಯಶಸ್ವಿಯಾಗಿ ಮುನ್ನಡೆಸುತ್ತಿದೆ. ಉತ್ತರ ಕರ್ನಾಟಕದಲ್ಲಿ ಮಾತ್ರ ಇದ್ದ ನಮ್ಮ ರೈತರ ಸೇವಾ ಉದ್ಯಮ, ಇಂದು ದಕ್ಷಿಣಕ್ಕೂ ವಿಸ್ತರಿಸಿದೆ. ರೈತರಿಂದ ಕಬ್ಬು ಪಡೆದು, ಬಿಲ್‌ ಕೊಡುವುದು ಅಷ್ಟೇ ನಮ್ಮ ಉದ್ದೇಶವಲ್ಲ.ರೈತರ ಆರ್ಥಿಕಮಟ್ಟ ಸುಧಾರಿಸಲು ನಿರಂತರ ಸಲಹೆ-ತರಬೇತಿ, ಕೃಷಿ ತಂತ್ರಜ್ಞಾನ ಅಳವಡಿಕೆ ಸಹಿತ ಎಲ್ಲ ರೀತಿಯ ರೈತಸ್ನೇಹಿ ಕಾರ್ಯಕ್ರಮ ರೂಪಿಸಲಾಗುತ್ತಿದೆ ಎಂದು ತಿಳಿಸಿದರು.

ವಿಧಾನ ಪರಿಷತ್‌ ಸದಸ್ಯ ಹಣಮಂತ ನಿರಾಣಿ, ನಿರಾಣಿ ಉದ್ಯಮ ಸಮೂಹದ ವ್ಯವಸ್ಥಾಪಕ ನಿರ್ದೇಶಕ ಸಂಗಮೇಶ ನಿರಾಣಿ,
ರೈತ ಮುಖಂಡರಾದ ವೆಂಕಣ್ಣ ಗಿಡ್ಡಪ್ಪನವರ, ಉದಯ ಸಾರವಾಡ, ಲಕ್ಷ್ಮಣ ದೊಡಮನಿ, ಗಿರಿಮಲ್ಲಯ್ಯ ಗಣಾಚಾರಿ, ಶಿವನಗೌಡ
ಪಾಟೀಲ, ಭರಮು ಉಳ್ಳಾಗಡ್ಡಿ, ಶ್ರೀಶೈಲಪ್ಪ ಉಳ್ಳಾಗಡ್ಡಿ, ಮುತ್ತಪ್ಪ ಗಣಿ, ಸಿದ್ದಪ್ಪ ಕಡಪಟ್ಟಿ, ಸದಾಶಿವ ಕದಂ, ಸತ್ಯಪ್ಪ ಅಂತಾಪುರ ಮುಂತಾದವರು ಪಾಲ್ಗೊಂಡಿದ್ದರು.

ಕಳೆದ 25 ವರ್ಷಗಳಲ್ಲಿ ನಿರಾಣಿ ಸಮೂಹ ದೇಶದ ಅತಿ ಚಿಕ್ಕ ಕಾರ್ಖಾನೆಯಿಂದ ಆರಂಭಗೊಂಡು, ಇಂದು ದೇಶದ ದೊಡ್ಡ ಕಾರ್ಖಾನೆಯಾಗಿ ಬೆಳೆದಿದೆ. ಇದಕ್ಕೆ ರೈತ ಕುಟುಂಬಗಳ ಪ್ರೀತಿ, ಅಭಿಮಾನ ಹಾಗೂ ನಿರಾಣಿ ಸಮೂಹದ ಮೇಲೆ ಅವರಿಟ್ಟ ವಿಶ್ವಾಸವೇ ಕಾರಣ.
ಡಾ| ಮುರುಗೇಶ ನಿರಾಣಿ, ಮಾಜಿ
ಸಚಿವರು ಹಾಗೂ ಸಂಸ್ಥಾಪಕ ಅಧ್ಯಕ್ಷರು,
ಎಂಆರ್‌ಎನ್‌ ಉದ್ಯಮ ಸಮೂಹ

Advertisement

Udayavani is now on Telegram. Click here to join our channel and stay updated with the latest news.

Next