Advertisement

ತಮ್ಮನಿಂದಲೇ ಅಣ್ಣನ ಮಕ್ಕಳ ಮೇಲೆ ಮಾರಕಾಸ್ತ್ರದಿಂದ ಹಲ್ಲೆ, ಓರ್ವ ಸಾವು ಇನ್ನೋರ್ವ ಗಂಭೀರ

07:44 PM Sep 30, 2021 | Team Udayavani |

ಹುನಗುಂದ : ಆಸ್ತಿ ವಿವಾದಕ್ಕೆ ಸಂಬಂಧಿಸಿ ಅಣ್ಣ ತಮ್ಮಂದಿರ ಮಧ್ಯೆ ದ್ವೇಷಕ್ಕೆ ತಮ್ಮನೇ ಅಣ್ಣನ ಮಗನನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿರುವ ಘಟನೆ ಹುನಗುಂದ ಪಟ್ಟಣದ ಮೇಗಲಪೇಟೆಯಲ್ಲಿ ನೆಡದಿದೆ.

Advertisement

ಆಸ್ತಿ ಗಲಾಟೆಯಲ್ಲಿ ಪುನೀತಕುಮಾರ ಬಸವರಾಜ ಮನ್ನಾಪೂರ (28)ಹತ್ಯೆಗೊಳಗಾದ ಯುವಕ.ಇತನ ಅಣ್ಣ ಯುವರಾಜ ಮನ್ನಾಪೂರ ಗಂಭೀರವಾಗಿ ಗಾಯಗೊಂಡು ಬಾಗಲಕೋಟೆ ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗದ್ದಾರೆ.

ಘಟನೆ ವಿವರ : ಕಳೆದ ಐದಾರು ವರ್ಷಗಳಿಂದ 3 ಎಕರೆ ಜಮೀನು ಮತ್ತು ಮನೆಯ ವಿಚಾರವಾಗಿ ಅಣ್ಣ ತಮ್ಮನ ಮಧ್ಯೆ ನಿರಂತರ ಗಲಾಟೆ ನೆಡೆಯುತ್ತಲೇ ಇತ್ತು. ಆಸ್ತಿ ಪಾಲಿನ ಸಲುವಾಗಿ ಇವರಲ್ಲಿ ದ್ವೇಷ ಉದ್ಬವವಾಗಿತ್ತು. ಬುಧವಾರ ರಾತ್ರಿ 8 ಗಂಟೆಯ ಸುಮಾರಿಗೆ ಆಸ್ತಿ ದ್ವೇಷವಿಟ್ಟುಕೊಂಡ ತಮ್ಮ ಅಣ್ಣನ ಮಕ್ಕಳಾದ ಪುನೀತಕುಮಾರ ಮತ್ತು‌ಯುವರಾಜ ಬೈಕಿನಲ್ಲಿ ಮನೆಯ ಕಡೆಗೆ ಹೊರಾಟ ಸಂದರ್ಭದಲ್ಲಿ ಅವರ ಬೈಕ್ ಅಡ್ಡಗಟ್ಟಿ ಪುನೀತಕುಮಾರ ಮತ್ತು ಯುವರಾಜನಿಗೆ ಮಾರಕಾಸ್ತ್ರಗಳಿಂದ ಮಾರಣಾಂತಿಕವಾಗಿ ಹಲ್ಲೆದೈದಿದ್ದು,ಗಂಭೀರ ಗಾಯಗೊಂಡ ಅವರನ್ನು ಸ್ಥಳೀಯ ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗೆ ಬಾಗಲಕೋಟಿಗೆ ಕರೆದ್ಯೋಯುವಾಗ ಮಾರ್ಗ ಮಧ್ಯೆ ಪುನೀತಕುಮಾರ ಮೃತಪಟ್ಟಿದ್ದಾನೆ.

ಇದನ್ನೂ ಓದಿ :ಎಪಿಎಂಸಿ ಸಮಸ್ಯೆಗಳ ಬಗೆಹರಿಸಲು ಕ್ರಮ ವಹಿಸಲಾಗುವುದು: ಸಚಿವ ಎಸ್.ಟಿ.ಸೋಮಶೇಖರ್

ಡಿವೈಎಸ್ ಪಿ ಚಂದ್ರಕಾಂತ ನಂದರಡ್ಡಿ,ಸಿಪಿಐ ಹೊಸಕೇರಪ್ಪ ಕೂಳ್ಳೂರ,ಪಿಎಸ್ಐ ಎಸ್.ಆರ್ ನಾಯಕ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ಪ್ರಕರಣವನ್ನು ಹುನಗುಂದ ಪೋಲಿಸ್ ಠಾಣೆಯಲ್ಲಿ ದಾಖಲಿಸಿಕೊಂಡಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next