Advertisement

ಬದಿಯಡ್ಕ: ಬಾವಿಗೆ ಬಿದ್ದ ವೈದ್ಯರ ರಕ್ಷಣೆ

08:06 PM Jul 12, 2023 | Team Udayavani |

ಬದಿಯಡ್ಕ: ಸುಮಾರು 36 ಅಡಿ ಆಳದ ಬಾವಿಗೆ ಬಿದ್ದ ವೈದ್ಯರನ್ನು ಸ್ಥಳೀಯರು ಹಾಗೂ ಅಗ್ನಿಶಾಮಕ ದಳ ಸೇರಿ ರಕ್ಷಿಸಿದ ಘಟನೆ ಬದಿಯಡ್ಕದಲ್ಲಿ ನಡೆದಿದೆ.

Advertisement

ಬದಿಯಡ್ಕ ಪೇಟೆಯಲ್ಲಿ ಕ್ಲಿನಿಕ್‌ ನಡೆಸುತ್ತಿರುವ ಪ್ರಶಾಂತ ನಿಲಯದ ಡಾ| ಪ್ರದೀಪ್‌ ಕುಮಾರ್‌(46) ಅವರನ್ನು ಮೇಲಕ್ಕೆತ್ತಿ ರಕ್ಷಿಸಲಾಯಿತು.

ಕ್ಲಿನಿಕ್‌ನ ಸಮೀಪದಲ್ಲಿ ಆವರಣವಿಲ್ಲದ ಬಾವಿಗೆ ವೈದ್ಯರು ಬಿದ್ದಿದ್ದರು. ಇದನ್ನು ಕಂಡ ಸ್ಥಳೀಯರು ಇತರರಿಗೆ ಮಾಹಿತಿ ನೀಡಿದರು.

ಈ ವೇಳೆ ಸ್ಥಳದಲ್ಲಿದ್ದ ರಾಮ್‌ ನಾಯ್ಕ (35) ಮತ್ತು ಅನಿಲ್‌ (28) ಅವರು ಕೂಡಲೇ ಬಾವಿಗಿಳಿದು ವೈದ್ಯರನ್ನು ಅಪಾಯದಿಂದ ರಕ್ಷಿಸಿದ್ದಾರೆ. ಆದರೆ ಅನಂತರ ಅವರಿಗೆ ಮೇಲಕ್ಕೆ ಹತ್ತಲು ಸಾಧ್ಯವಾಗಲಿಲ್ಲ. ಈ ವಿಷಯ ಅರಿತು ಕಾಸರಗೋಡು ಅಗ್ನಿಶಾಮಕ ದಳದ ಸ್ಟೇಷನ್‌ ಆಫೀಸರ್‌ ಪ್ರಕಾಶ್‌ ಕುಮಾರ್‌, ಸೀನಿಯರ್‌ ಫಯರ್‌ ಆ್ಯಂಡ್‌ ರೆಸ್ಕೂ ಆಫೀಸರ್‌ ಮನೋಹರ್‌, ಉಮ್ಮರ್‌, ಶೆರಿನ, ಸುಂದರ್‌, ಅರುಣ್‌ ಕುಮಾರ್‌, ಹೋಂಗಾರ್ಡ್‌ ರಾಜನ್‌ ಈ ಇಬ್ಬರನ್ನು ಮೇಲಕ್ಕೆತ್ತಿ ರಕ್ಷಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next