Advertisement

ಕೆಟ್ಟ ಶಬ್ದ ಬಳಕೆ ಶೋಭೆಯಲ್ಲ : ಬಾದರ್ಲಿ

11:47 AM Oct 14, 2021 | Team Udayavani |

ಸಿಂಧನೂರು: ಮಾಜಿ ಸಂಸದ ಕೆ. ವಿರೂಪಾಕ್ಷಪ್ಪ ಅವರು ಹಿರಿಯ ರಾಜಕಾರಣಿ, ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧ ಕೆಟ್ಟ ಪದ ಬಳಕೆ ಮಾಡುವುದು ಅವರಿಗೆ ಶೋಭೆ ತರುವುದಿಲ್ಲ ಎಂದು ಮಾಜಿ ಶಾಸಕ ಹಂಪನಗೌಡ ಬಾದರ್ಲಿ ಅಸಮಾಧಾನ ವ್ಯಕ್ತಪಡಿಸಿದರು.

Advertisement

ಅವರು ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಮಾಜಿ ಸಿಎಂ ಸಿದ್ದರಾಮಯ್ಯ ಅವರು ತಮ್ಮ ಅಧಿಕಾರವಧಿಯಲ್ಲಿ ಮಾಡಿದ ಕೆಲಸಗಳನ್ನು ಮಾಜಿ ಸಂಸದರು ಗಮನಿಸಬೇಕು. ಎಸ್ಸಿ, ಎಸ್ಟಿ ಸಮುದಾಯಕ್ಕೆ ಬಜೆಟ್‌ನಲ್ಲಿ 29 ಸಾವಿರ ಕೋಟಿ ರೂ.ಗಳನ್ನು ಕಲ್ಪಿಸಲು ವಿಶೇಷ ಕಾನೂನು ಜಾರಿಗೆ ತಂದರು. 371ಜೆ ಕಲಂ ಜಾರಿಯ ಮೂಲಕ ಹಿಂದುಳಿದ ಪ್ರದೇಶದ ಎಲ್ಲ ವರ್ಗ, ಜಾತಿಯ ಜನರಿಗೆ ಅನುಕೂಲ ಕಲ್ಪಿಸಿದರು. ಅನೇಕರು ಇಂದು ಉದ್ಯೋಗಸ್ಥರಾಗಿರುವುದರ ಹಿಂದೆ ಅವರ ಶ್ರಮದ ಫಲವಿದೆ ಎಂದರು.

ವರದಿಯಲ್ಲಿ ದುರುದ್ದೇಶವಿಲ್ಲ

ಸಿದ್ದರಾಮಯ್ಯ ಅವರು ಹಿಂದುಳಿದ ವರ್ಗಗಳ ಜಾತಿಗಣತಿ ವರದಿ ಮಾಡಲು ತಮ್ಮ ಇಚ್ಛಾಶಕ್ತಿಯಿಂದಲೇ ಆದೇಶ ಹೊರಡಿಸಿದ್ದರು. 2018ರ ಹೊತ್ತಿಗೆ ಅವಧಿ ಮುಕ್ತಾಯವಾಯಿತು. ಆ ಹೊತ್ತಿಗೆ ಆಯೋಗದ ಅಮಾಡಲು ಆದೇಶ ಹೊರಡಿಸಿದ್ದ ಸಿದ್ದರಾಮಯ್ಯರಿಗೆ ಅಪೂರ್ಣ ವರದಿ ಸಲ್ಲಿಸಲು ಮುಂದಾಗಿದ್ದರು. ಆ ಹೊತ್ತಿಗೆ ಆಯೋಗದ ಅಧ್ಯಕ್ಷ ಕಾಂತರಾಜ್‌ ಅವರು ಬಂದು, ಇನ್ನು ಸಿಟಿ ಸರ್ವೇ ನಡೆಸಲು ಅವಕಾಶ ಕೇಳಿದ್ದರು. ಅದನ್ನು ಸಿದ್ದರಾಮಯ್ಯ ಅವರು ನೀಡಿದ್ದರು. ನಂತರದಲ್ಲಿ ಕುಮಾರಸ್ವಾಮಿ ಸರಕಾರ ಬಂತು. ಹೀಗಾಗಿ, ವರದಿ ಸ್ವೀಕರಿಸಲು ಇಂದಿಗೂ ಅವರು ಒತ್ತಾಯಿಸುತ್ತಿದ್ದು, ಅದಕ್ಕೆ ಬದ್ಧರಾಗಿದ್ದಾರೆ. ಆದರೆ, ಜಾತಿ ಜನಗಣತಿ ವರದಿ ವಿಷಯ ಮುಂದಿಟ್ಟುಕೊಂಡು ಕಪಟ ನಾಟಕ, ಮೋಸ, ಮೋಸ ಎಂಬ ಕೆಟ್ಟ ಪದಗಳನ್ನು ಬಳಸಿ ಟೀಕೆ ಮಾಡುವುದು ಸೂಕ್ತವಲ್ಲ ಎಂದರು.

ಇದನ್ನೂ ಓದಿ:  ಜಪಾನ್ ಪ್ರಧಾನಿ ಶಿಷ್ಯವೇತನಕ್ಕೆ ಮುದ್ದೇಬಿಹಾಳದ ಗೌರಿ ಬಗಲಿ ಆಯ್ಕೆ

Advertisement

ವೀರಶೈವ ಲಿಂಗಾಯತರ ಭೀತಿಯಿದ್ದರೆ, ಸಿದ್ದರಾಮಯ್ಯ ಅವರು 6 ಕೋಟಿ ಜನರ ಆರ್ಥಿಕ, ಶೈಕ್ಷಣಿಕ, ಸಾಮಾಜಿಕ ಸ್ಥಿತಿಗತಿ ಆಧರಿಸಿ ವರದಿ ನೀಡಲು ಆದೇಶ ಹೊರಡಿಸುತ್ತಿರಲಿಲ್ಲ. ಅವರ ವಿರುದ್ಧ ಲಿಂಗಾಯತರು ಕೋಪಗೊಂಡಿಲ್ಲ. ನಾವೆಲ್ಲ ಲಿಂಗಾಯತರಲ್ಲವೇ? ಅಮರೇಗೌಡ ಬಯ್ನಾಪುರ, ದರ್ಶನಾಪುರ, ನಾನು ಸೇರಿ ಅನೇಕರು ಅವರನ್ನು ಮೆಚ್ಚಿದ್ದೇವೆ. ಸಿದ್ದರಾಮಯ್ಯ ಅವರ ವ್ಯಕ್ತಿತ್ವ ದೊಡ್ಡದು. ದೇವರಾಜು ಅರಸು ಮಾದರಿಯಲ್ಲೇ ಎಲ್ಲ ವರ್ಗಕ್ಕೆ ಸೌಲಭ್ಯ ಕಲ್ಪಿಸಿದ ಕೀರ್ತಿ ಅವರಿಗೆ ದಕ್ಕುತ್ತದೆ. ರಾಜಕೀಯಕ್ಕಾಗಿ ಟೀಕಿಸಲು ಕೆಟ್ಟ ಶಬ್ದ ಬಳಸುವುದನ್ನು ನಾವು ಖಂಡಿಸಬೇಕಾಗುತ್ತದೆ ಎಂದರು.

ವಕೀಲರಾದ ಎಂ.ಕಾಳಿಂಗಪ್ಪ, ನಿರುಪಾದೆಪ್ಪ ಗುಡಿಹಾಳ, ನಗರ ಕಾಂಗ್ರೆಸ್‌ ಅಧ್ಯಕ್ಷ ಖಾಜಿಮಲಿಕ್‌, ಮಸ್ಕಿ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಹನುಮಂತಪ್ಪ ಮುದ್ದಾಪುರ, ನಗರಸಭೆ ಮಾಜಿ ಅಧ್ಯಕ್ಷ ಜಾಫರ್‌ ಜಾಹಗೀರದಾರ್‌ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next