Advertisement

Bangalore: ವಾಣಿ ವಿಲಾಸ ಆಸ್ಪತ್ರೆಯಲಿ ಹಸುಗೂಸಿಗೆ  ಕಚ್ಚಿದ ಜಿರಳೆಗಳು; ಪೋಷಕರ ಆಕ್ರೋಶ

09:49 AM Dec 03, 2023 | Team Udayavani |

ಬೆಂಗಳೂರು: ನಗರದ ಸರ್ಕಾರಿ ವಾಣಿ ವಿಲಾಸ ಆಸ್ಪತ್ರೆಯಲ್ಲಿ ದಾಖಲಾಗಿದ್ದ ಎರಡು ದಿನದ ನವಜಾತ ಶಿಶುವಿನ ದೇಹವನ್ನು ಜಿರಳೆಗಳು ಕಚ್ಚಿ ಗಾಯಗೊಳಿಸಿರುವ ಕುರಿತು ಪೋಷಕರು ಆರೋಪಿಸಿದ್ದಾರೆ.

Advertisement

ನಾಗರಬಾವಿಯ ಆಶಾರಾಣಿ ಅವರು ವಾಣಿ ವಿಲಾಸ ಆಸ್ಪತ್ರೆಗೆ ಹೆರಿಗೆಗೆ ದಾಖಲಾಗಿದ್ದರು. ಅವರು ಗುರುವಾರ ಗಂಡು ಮಗುವಿಗೆ ಜನ್ಮ ನೀಡಿದ್ದು, ನವಜಾತ ಶಿಶು ಹಾಗೂ ಬಾಣಂತಿಯನ್ನು ವಾರ್ಡ್‌ ಶಿಫ್ಟ್ ಮಾಡಲಾಗಿತ್ತು. ಈ ವೇಳೆ ವಾರ್ಡ್‌ನಲ್ಲಿ ಮಗುವನ್ನು ಮಲಗಿಸಿದಾಗ ಜಿರಳೆಗಳು ನವಜಾತ ಶಿಶು ದೇಹ ಪೂರ್ತಿ ಜಿರಳೆಗಳು ಕಚ್ಚಿವೆ. ವಾಣಿ ವಿಲಾಸ ಆಸ್ಪತ್ರೆಯಲ್ಲಿ ಬಾಣಂತಿಯರ ಹಾಗೂ ಹೆರಿಗೆ ವಾರ್ಡ್‌ ಸ್ವಚ್ಛತೆ ಕೊರತೆ ಇದೆ. ಬಾಣಂತಿಯರು ಮಲಗುವ ಹಾಸಿಗೆ ಸ್ವತ್ಛತೆಯಿಲ್ಲದೇ ವಾರ್ಡ್‌ ತುಂಬೆಲ್ಲ ಜಿರಳೆಗಳ ಕಾಟವಿದೆ ಎಂದು ಪೋಷಕರು ಆರೋಪಿಸಿದರು.

ಜಿರಳೆ ಕಡಿತದಿಂದ ಗಾಯ ಆಗಿಲ್ಲ: ವಾಣಿವಿಲಾಸ ಆಸ್ಪತ್ರೆಯ ಅಧೀಕ್ಷಕಿ ಡಾ.ಸಿ.ಸವಿತಾ ಮಾತನಾಡಿ, ನವಜಾತ ಶಿಶುವಿಗೆ ಜಿರಳೆ ಕಚ್ಚಿರುವ ಆರೋಪಕ್ಕೆ ಸಂಬಂಧಿಸಿದಂತೆ ಮಕ್ಕಳ ತಜ್ಞರ ಹಾಗೂ ಚರ್ಮ ತಜ್ಞರನ್ನು ಕರೆಸಿ ತಪಾಸಣೆ ಮಾಡಿದ್ದು, ಮಾಹಿತಿಯನ್ನು ಸಹ ಪಡೆಯಲಾಗಿದೆ. ಇದು ಜಿರಳೆ ಕಡಿತದಿಂದ ಆಗಿರುವ ಗಾಯಗಳು ಅಲ್ಲ. ರ್ಯಾಶ್ಸ್ ನಿಂದಾಗಿದೆ. ಆಸ್ಪತ್ರೆಯ ವ್ಯವಸ್ಥೆಯಿಂದ ಯಾವುದೇ ಸಮಸ್ಯೆಯಾಗಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ. ‌

 

Advertisement

Udayavani is now on Telegram. Click here to join our channel and stay updated with the latest news.

Next